ನೌಕಾದಳಾಧಿಪತಿ ಲೂಯಿಸ್‌ ಫ್ರಾನ್ಸಿಸ್‌ ಆಲ್ಬರ್ಟ್‌‌ ವಿಕ್ಟರ್‌‌ ನಿಕೋಲಸ್‌‌‌‌ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ ಎಂಬಾತನು ಬರ್ಮಾದ ೧ನೆಯ ಅರ್ಲ್‌‌ ಅಂತಸ್ತಿನ ಮೌಂಟ್‌ಬ್ಯಾಟನ್‌‌ ಆಗಿದ್ದು , , , , , , , , (ಪೂರ್ವನಾಮ ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ; ೨೫ ಜೂನ್‌‌ ೧೯೦೦ – ೨೭ ಆಗಸ್ಟ್‌‌ ೧೯೭೯) ಬಿರುದಾಂಕಿತಗಳನ್ನು ಹೊಂದಿದ್ದ ಈತನು ಓರ್ವ ಬ್ರಿಟಿಷ್‌‌ ರಾಜನೀತಿಜ್ಞ ಮತ್ತು ನೌಕಾಪಡೆಯ ಅಧಿಕಾರಿಯಾಗಿದ್ದನಲ್ಲದೇ ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ (ಎಲಿಜಬೆತ್‌‌‌ IIಳ ಪತಿ) ಹಿರಿಯ ಸೋದರ ಸಂಬಂಧಿ ಆಗಿದ್ದರು. ಈತನು ಕೊನೆಯ ಭಾರತದ ವೈಸ್‌ರಾಯ್‌ (೧೯೪೭)ಆಗಿದ್ದು ೧೯೫೦ರಲ್ಲಿ ಆಧುನಿಕ ಭಾರತೀಯ ಗಣರಾಜ್ಯವು ರೂಪುಗೊಳ್ಳಲು ಕಾರಣವಾದ ಸ್ವತಂತ್ರ ಭಾರತೀಯ ಒಕ್ಕೂಟದ (೧೯೪೭–೪೮) ಪ್ರಥಮ ಮಹಾಮಂಡಲಾಧಿಪತಿ ಕೂಡಾ ಆಗಿದ್ದನು. ೧೯೫೪ರಿಂದ ೧೯೫೯ರವರೆಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ನ ಹುದ್ದೆಯಾಗಿದ್ದ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿದ್ದನು. ೧೯೭೯ರಲ್ಲಿ ಐರಿಷ್‌ ಗಣರಾಜ್ಯದ/ರಿಪಬ್ಲಿಕನ್‌ ಅನಧಿಕೃತ ಸೈನ್ಯವು (), ಐರ್ಲೆಂಡ್‌‌ ಗಣರಾಜ್ಯದ ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ ಎಂಬಲ್ಲಿ ಆತನ ಮೀನು ಹಿಡಿಯುವ ದೋಣಿ ಷ್ಯಾಡೋ ಗೆ ಬಾಂಬ್‌ ಅಳವಡಿಸಿ ಮೌಂಟ್‌‌ಬ್ಯಾಟನ್‌‌ನನ್ನು ಕೊಂದಿತ್ತು. ಆತನು ೨೦ನೆಯ ಶತಮಾನದ ಮಧ್ಯದಿಂದ ಕೊನೆಯವರೆಗಿನ ಅವಧಿಯಲ್ಲಿ ಬ್ರಿಟಿಷ್‌‌ ಸಾಮ್ರಾಜ್ಯವು ಅವನತಿ ಹೊಂದಲು ಕಾರಣವಾದ ಬಹು ಪ್ರಭಾವೀ ಹಾಗೂ ವಿವಾದಾಸ್ಪದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. == ಪೂರ್ವೇತಿಹಾಸ == ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನು ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ನಾಗಿ ಜನಿಸಿದ್ದನು, ಆದರೆ ನಂತರ ೧೯೧೭ರಲ್ಲಿ ಆತನ ಜರ್ಮನ್‌‌ ನಾಮಾಂಕಿತಗಳು ಹಾಗೂ ಪದವಿಸೂಚಕಗಳನ್ನು ಕೈಬಿಡಲಾಗಿತ್ತು. ಈತನು ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ ಮತ್ತು ಆತನ ಪತ್ನಿ ಹೆಸ್ಸೆ ಅಂಡ್‌‌ ಬೈ ರೈನ್‌‌ನ ರಾಣಿ ವಿಕ್ಟೋರಿಯಾ ದಂಪತಿಗಳ ಎರಡನೆಯ ಹಾಗೂ ಕಿರಿಯ ಮಗನಾಗಿದ್ದನು. ಹೆಸ್ಸೆ ಅಂಡ್‌‌ ಬೈ ರೈನ್‌‌ನ ಪ್ರಧಾನ ಡ್ಯೂಕ್‌ ಲುಡ್ವಿಗ್‌ ಮತ್ತು ರಾಣಿ ವಿಕ್ಟೋರಿಯಾ ಹಾಗೂ ರಾಜಕುಟುಂಬದ ಅಳಿಯ ಆಲ್ಬರ್ಟ್‌‌ ದಂಪತಿಗಳ ಪುತ್ರಿ ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಣಿ ಅಲೈಸ್‌ ದಂಪತಿಗಳು ಆತನ ತಾಯಿಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಹೆಸ್ಸೆಯ ಪ್ರಭು ಅಲೆಕ್ಸಾಂಡರ್‌‌ ಮತ್ತು ಬ್ಯಾಟೆನ್‌ಬರ್ಗ್‌‌‌ನ ರಾಣಿ ಜ್ಯೂಲಿಯಾ‌ ದಂಪತಿಗಳು ಆತನ ತಂದೆಯ ಕಡೆಯ ಅಜ್ಜ ಅಜ್ಜಿಯರಾಗಿದ್ದರು. ಆತನ ತಂದೆಯ ಕಡೆಯ ಅಜ್ಜಿಯು ರಾಜ ಮನೆತನಕ್ಕೆ ಸೇರಿದವಳಾಗಿಲ್ಲದಿದ್ದುದರಿಂದ ಆತನ ಅಜ್ಜಅಜ್ಜಿಯರ ವಿವಾಹವು ಅನುಲೋಮ ವಿವಾಹವಾಗಿದ್ದುದರ ಪರಿಣಾಮವಾಗಿ, ಆತ ಮತ್ತು ಆತನ ತಂದೆಯವರಿಗೆ "ಘನತೆವೆತ್ತ ಪ್ರಭು " ಎಂಬ ಪದವಿಸೂಚಕವನ್ನು ನೀಡಲಾಗಿತ್ತು ಹಾಗೂ ಅವರುಗಳು "ಪ್ರಧಾನ ಡ್ಯೂಕ್‌‌,"ನ ಬದಲಿಗೆ ಹೆಸ್ಸೆಯ ರಾಜಕುಮಾರ ಪದವಿಸೂಚಕವನ್ನು ಹೊಂದಲು ಅರ್ಹರಾಗಿರಲಿಲ್ಲವಾದುದರಿಂದ ಅವರಿಗೆ ಕಡಿಮೆ ಮಹತ್ವದ ಬ್ಯಾಟೆನ್‌ಬರ್ಗ್‌‌‌ ಪದವಿಸೂಚಕವನ್ನು ನೀಡಲಾಗಿತ್ತು. ಗ್ರೀಸ್‌‌ ಮತ್ತು ಡೆನ್ಮಾರ್ಕ್‌ಗಳ ರಾಣಿ ಅಲೈಸ್‌‌ (ಎಡಿನ್‌ಬರ್ಗ್‌ನ ಡ್ಯೂಕ್‌ ಪ್ರಭು ಫಿಲಿಪ್‌ನ ತಾಯಿ), ಸ್ವೀಡನ್‌‌ನ ರಾಣಿ ಲೂಯಿಸ್ಸೆ ಹಾಗೂ ಮಿಲ್‌‌ಫರ್ಡ್‌ ಹೆವನ್‌‌ನ ೨ನೆಯ ಮಾರ್ಕ್ವಿಸ್‌‌ ಆಗಿದ್ದ ಜಾರ್ಜ್‌‌ ಮೌಂಟ್‌‌ಬ್ಯಾಟನ್‌‌ರವರುಗಳು ಈತನ ರಕ್ತಸಂಬಂಧಿಗಳಾಗಿದ್ದರು. ಆತನ ತಂದೆಯ ನಲವತ್ತೈದು ವರ್ಷಗಳ ವೃತ್ತಿಜೀವನವು ಅವರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೧೨ರಲ್ಲಿ ನೇಮಕಾತಿಯಾದಾಗ ಶೃಂಗ ತಲುಪಿತು. ಆದಾಗ್ಯೂ ಎರಡು ವರ್ಷಗಳ ನಂತರ ೧೯೧೪ರಲ್ಲಿ ವಿಶ್ವ ಸಮರ Iರ ಮೊದಲ ಕೆಲವು ತಿಂಗಳುಗಳ ಕಾಲ ಹಾಗೂ ಸಮುದ್ರದ ಮೇಲೆ ಅನೇಕ ಕಾಳಗಗಳನ್ನು ಸೋತ ನಂತರ ಯುರೋಪ್‌‌ನಾದ್ಯಂತ ಹರಡುತ್ತಿದ್ದ ಜರ್ಮನ್‌‌ ವಿರೋಧಿ ಮನೋಭಾವನೆಯ ಪರಿಣಾಮವಾಗಿ ಪ್ರಭು ಲೂಯಿಸ್‌ರು ಆ ಸ್ಥಾನದಿಂದ ತಾನು ಕೆಳಗಿಳಿಯುವುದು ತನ್ನ ಕರ್ತವ್ಯವೆಂದು ಭಾವಿಸಿದರು. ೧೯೧೭ರಲ್ಲಿ, ರಾಜಕುಟುಂಬವು ತಮ್ಮ ಜರ್ಮನ್‌‌ ಹೆಸರುಗಳು ಹಾಗೂ ಪದವಿಗಳನ್ನು ಬಳಸುವುದನ್ನು ನಿಲ್ಲಿಸಿದಾಗಿನಿಂದ ಬ್ಯಾಟೆನ್‌ಬರ್ಗ್‌‌‌ನ ಪ್ರಭು ಲೂಯಿಸ್‌ರು ಲೂಯಿಸ್‌ ಮೌಂಟ್‌‌ಬ್ಯಾಟನ್‌‌ನಾಗಿ ಕರೆಯಲ್ಪಟ್ಟು ಮಿಲ್‌‌ಫರ್ಡ್‌ ಹೆವನ್‌ನ ಮಾರ್ಕ್ವಿಸ್‌‌ ಸ್ಥಾನವನ್ನು ಸೃಷ್ಟಿಸಿ ಆತನಿಗೆ ನೀಡಲಾಯಿತು. ಆತನ ಎರಡನೇ ಪುತ್ರನು ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ ಎಂಬ ಉಪಾಧಿಯನ್ನು ಪಡೆದನು ಹಾಗೂ ತೀರ ಪೂರ್ವ ಪ್ರದೇಶದಲ್ಲಿ ಯುದ್ಧಕಾಲದಲ್ಲಿ ಅವರು ನೀಡಿದ ಅತ್ಯುತ್ತಮ ಸೇವೆಗಾಗಿ ವೈಕೌಂಟ್‌ಗಿರಿ/ವೈಕೌಂಟ್‌ ಪದವಿ ಹಾಗೂ ಬ್ರಿಟಿಷ್‌‌ ಪಾರತಂತ್ರ್ಯದಿಂದ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿ ಭಾರತದ ಸ್ಥಿತ್ಯಂತರದ ಸಮಯದಲ್ಲಿ ವಹಿಸಿದ ಪಾತ್ರಕ್ಕಾಗಿ ಅರ್ಲ್‌ ಪದವಿಯನ್ನು ನೀಡಿದ್ದು ಆತನ ಸಾವಿನವರೆಗೆ ಲಾರ್ಡ್‌‌ ಲೂಯಿಸ್‌ ಎಂದೇ ಕರೆಸಿಕೊಳ್ಳಲ್ಪಟ್ಟನು. == ಆರಂಭಿಕ ಜೀವನ == ಮೌಂಟ್‌‌ಬ್ಯಾಟನ್‌‌ನು ತನ್ನ ಜೀವನದಲ್ಲಿನ ಮೊದಲ ಹತ್ತು ವರ್ಷಗಳ ಕಾಲ ಗೃಹಶಿಕ್ಷಣವನ್ನು ಪಡೆದನು. ಆತನನ್ನು ನಂತರ ಹರ್ಟ್‌‌ಫೋರ್ಡ್‌‌ಷೈರ್‌‌‌ನಲ್ಲಿನ ಲಾಕರ್ಸ್‌ ಪಾರ್ಕ್‌ ಶಾಲೆಗೆ ಕಳಿಸಲಾಯಿತು, ಅಂತಿಮವಾಗಿ ಆತನು ತನ್ನ ಹಿರಿಯ ಸಹೋದರನ ಹಾಗೆ ನೌಕಾಪಡೆಯ ಸೇನಾ ವಿದ್ಯಾರ್ಥಿಗಳ ಶಾಲೆ/ನೇವಲ್‌ ಕೆಡೆಟ್‌ ಶಾಲೆಗೆ ಸೇರಿಕೊಂಡನು. ಬಾಲ್ಯದಲ್ಲಿ ಆತನು ಪೀಟರ್ಸ್‌ಬರ್ಗ್‌ನಲ್ಲಿನ ರಷ್ಯಾದ ರಾಜರ ಆಸ್ಥಾನಕ್ಕೆ ಭೇಟಿ ನೀಡಿದ್ದನು ಹಾಗೂ ಅಳಿವಿಗೆ ಸರಿಯುತ್ತಿದ್ದ ರಷ್ಯನ್‌‌ ರಾಜ ಕುಟುಂಬದೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದನು ; ಇನ್ನೂ ಜೀವಿಸಿರುವಳೆಂದು ತಿಳಿಯಲ್ಪಟ್ಟ ಪ್ರಧಾನ ಡಚೆಸ್‌ ಅನಾಸ್ತೇಷಿಯಾಳೆಂದು ಸೋಗು ಹಾಕಿಕೊಂಡು ಬಂದವರ ಹೇಳಿಕೆಗಳನ್ನು ಅಧಿಕಾರಯುತವಾಗಿ ಅಲ್ಲಗಳೆಯಲು ನಂತರದ ತನ್ನ ಜೀವನದಲ್ಲಿ ಆತನನ್ನು ಕರೆಸಲಾಗಿತ್ತು. ತಾನು ಯುವಕನಾಗಿದ್ದಾಗ ಆತನು ಅನಾಸ್ತೇಷಿಯಾಳ ಸಹೋದರಿ ಪ್ರಧಾನ ಡಚೆಸ್‌ ಮಾರಿಯಾಳೆಡೆಗೆ ಪ್ರೇಮಭಾವನೆಯನ್ನು ಹೊಂದಿದ್ದ, ಮಾತ್ರವಲ್ಲದೇ ತನ್ನ ಅಂತ್ಯದವರೆಗೂ ಆಕೆಯ ಭಾವಚಿತ್ರವನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಂಡಿರುತ್ತಿದ್ದ. ತನ್ನ ಅಣ್ಣನ ಪುತ್ರನ ಹೆಸರಿನ ಬದಲಾವಣೆ ಹಾಗೂ ಭವಿಷ್ಯದ ರಾಣಿಯೊಂದಿಗೆ ಆತನ ವಿವಾಹ ನಿಶ್ಚಯದ ನಂತರ, ಯುನೈಟೆಡ್‌ ಕಿಂಗ್‌ಡಮ್‌‌‌ನ ರಾಜವಂಶಕ್ಕೆ ಭವಿಷ್ಯದ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ "ನೆಂದು ಸೂಚಿಸಲ್ಪಟ್ಟನೆಂದು ಹೇಳಲಾದರೂ, "ಆ ಅಸಂಬದ್ಧ ಬ್ಯಾಟೆನ್‌ಬರ್ಗ್‌‌‌ "ನ ವಿಚಾರದಲ್ಲಿ ತನಗೆ ಆಗಬೇಕಾದ್ದೇನೂ ಇಲ್ಲ ಎಂದು ರಾಜವಿಧವೆ ರಾಣಿ ಮೇರಿ ನಿರಾಕರಿಸಿದಳೆಂದು ಹೇಳಲಾಗಿದೆ. ರಾಜಮನೆತನದ ಆ ಗೃಹದ ಹೆಸರು ವಿಂಡ್ಸರ್‌‌ ಎಂದಾಯಿತು ಹಾಗೂ ತದನಂತರದ ರಾಜಶಾಸನದ ಮೂಲಕ ಅದೇ ಹೆಸರಿನಲ್ಲಿಯೇ ಉಳಿಯಿತು. ಆದಾಗ್ಯೂ ಈ ಹೆಸರನ್ನು ಪ್ರಭುತ್ವದ ಇಚ್ಛೆಯ ಮೇರೆಗೆ ಬದಲಿಸಬಹುದಾಗಿದೆ. ಎಲಿಜಬೆತ್‌‌‌ ಮತ್ತು ಪ್ರಭು ಫಿಲಿಪ್‌ರ ವಿವಾಹವಾದ ನಂತರ ಅವರ ರಾಜಕುಟುಂಬಕ್ಕೆ ಸೇರಿಲ್ಲದ ವಂಶಸ್ಥರು (ತಾಯಿಯ ಕಡೆಯ) ಅಡ್ಡಹೆಸರು "ಮೌಂಟ್‌‌ಬ್ಯಾಟನ್‌‌ -ವಿಂಡ್ಸರ್‌‌ " ಎಂದು ಕರೆಸಿಕೊಳ್ಳಬೇಕೆಂದು ಶಾಸನ ಹೊರಡಿಸಲಾಗಿತ್ತು. ಮಹಾರಾಜನ ಶವಸಂಸ್ಕಾರಗಳು ಅಂತ್ಯಗೊಂಡ ಒಂದು ವಾರದೊಳಗೆಯೇ ಹೊಸ ರಾಣಿಯ ಸೋದರಸಂಬಂಧಿ ಡಿಕೀ (ಎಂದರೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌) ಎಂಬಾತ ಬ್ರಾಡ್‌ಲ್ಯಾಂಡ್ಸ್‌‌ನಲ್ಲಿನ ಅತಿಥಿಗಳಿಗೆ "ಹೌಸ್‌ ಆಫ್‌ ಮೌಂಟ್‌‌ಬ್ಯಾಟನ್‌‌ ಈಗ ಅಧಿಪತ್ಯವನ್ನು ನಡೆಸಲಿದೆ !" ಎಂದು ಘೋಷಿಸಿದ್ದರು == ವೃತ್ತಿಜೀವನ == === ಆರಂಭಿಕ ವೃತ್ತಿಜೀವನ === ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ವಿಶ್ವ ಸಮರ Iರ ಅವಧಿಯಲ್ಲಿ ಬ್ರಿಟನ್ನಿನ ನೌಕಾಪಡೆಯಲ್ಲಿ ಮಿಡ್‌ಷಿಪ್‌ಮ್ಯಾನ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತನ್ನ ಸೇವಾವಧಿಯ ನಂತರ ಕೇಂಬ್ರಿಡ್ಜ್‌‌ನಲ್ಲಿನ ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದಲ್ಲಿ ಎರಡು ಅವಧಿಗಳ ಕಾಲ ಮಾಜಿ ಸೈನಿಕಗಿಗೆಂದೇ ವಿನ್ಯಾಸ ಮಾಡಲಾಗಿದ್ದ ಶಿಕ್ಷಣ ಯೋಜನೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆದರು. ತಾನು ಕೇಂಬ್ರಿಡ್ಜ್‌‌ನಲ್ಲಿದ್ದ ಸಮಯದಲ್ಲಿ, ಮೌಂಟ್‌‌ಬ್ಯಾಟನ್‌‌ನು ಕ್ರೈಸ್ಟ್‌'ಸ್‌ ಕಾಲೇಜ್‌ ಮಹಾವಿದ್ಯಾಲಯದ ಸದಸ್ಯನಾಗಿ ಸಮೃದ್ಧವಾದ ಸಾಮಾಜಿಕ ಜೀವನದ ಸವಿಯ ಮಧ್ಯೆಯೇ ತನ್ನ ಅಧ್ಯಯನವನ್ನು ಕೂಡಾ ಸರಿದೂಗಿಸಬೇಕಾಗುತ್ತಿತ್ತು. ೧೯೨೨ರಲ್ಲಿ ಮೌಂಟ್‌‌ಬ್ಯಾಟನ್‌‌ ವೇಲ್ಸ್‌‌ನ ರಾಜಕುಮಾರ/ಪ್ರಭು ಎಡ್ವರ್ಡ್‌ನೊಡನೆ ಭಾರತಕ್ಕೆ ರಾಜಮನೆತನದ ಭೇಟಿಯ ಭಾಗವಾಗಿ ಬಂದಿದ್ದನು. ಈ ಪ್ರವಾಸದ ಸಮಯದಲ್ಲಿಯೇ ಆತನು ತನ್ನ ಪತ್ನಿಯಾಗಲಿದ್ದ ಎಡ್ವಿನಾ ಆಷ್ಲೇಳನ್ನು ಭೇಟಿ ಮಾಡಿದ್ದನು ಹಾಗೂ ನಂತರ ಅವಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಿದ್ದನು. ಅವರು ೧೮ ಜುಲೈ ೧೯೨೨ರಂದು ವಿವಾಹವಾದರು. ಈ ಪ್ರವಾಸದ ಸಮಯದಲ್ಲಿ ಎಡ್ವರ್ಡ್‌ ಮತ್ತು ಮೌಂಟ್‌‌ಬ್ಯಾಟನ್‌‌ ಉತ್ತಮ ಸ್ನೇಹವನ್ನು ಬೆಳೆಸಿಕೊಂಡರಾದರೂ ಈ ಬಾಂಧವ್ಯವು ಸಿಂಹಾಸನಚ್ಯುತಿ/ಪದಚ್ಯುತಿಯ ಬಿಕ್ಕಟ್ಟಿನ ಸಮಯದಲ್ಲಿ ಕಡಿಮೆಯಾಗುತ್ತಾ ಹೋಯಿತು. ಒಂದೆಡೆಯಲ್ಲಿ ವ್ಯಾಪಕವಾಗಿ ಇಡೀ ರಾಜಮನೆತನ ಹಾಗೂ ಪ್ರಭುತ್ವ ಹಾಗೂ ಮತ್ತೊಂದೆಡೆ ಆಗಿನ ಮಹಾರಾಜ ಎರಡರ ವಿಚಾರದಲ್ಲಿಯೂ ಮೌಂಟ್‌‌ಬ್ಯಾಟನ್‌‌ನ ನಿಷ್ಠೆಯು ಪರೀಕ್ಷೆಗೊಳಪಟ್ಟಿತ್ತು. ಮೌಂಟ್‌‌ಬ್ಯಾಟನ್‌‌ ತನ್ನ ಸಹೋದರನ ಸ್ಥಾನದಲ್ಲಿ ಜಾರ್ಜ್‌‌ ಎಂಬ ಹೆಸರಿನಲ್ಲಿ ಸಿಂಹಾಸನವನ್ನೇರಬೇಕಿದ್ದ ಯಾರ್ಕ್‌‌ನ ಡ್ಯೂಕ್‌ ರಾಜಕುಮಾರ/ಪ್ರಭು ಆಲ್ಬರ್ಟ್‌‌ನ ಕಡೆಗೆ ದೃಢವಾದ ನಿಷ್ಠೆಯನ್ನು ಪ್ರದರ್ಶಿಸಿದನು. ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಯಂತ್ರವಿಶೇಷಗಳಲ್ಲಿನ ತನ್ನ ಆಸಕ್ತಿಯನ್ನು ಅರಸಿಕೊಂಡು ೧೯೨೪ರಲ್ಲಿ ಪೋರ್ಟ್ಸ್‌ಮೌತ್‌ ಸಿಗ್ನಲ್‌ ಶಾಲೆಗೆ ಸೇರಿಕೊಂಡು ಅಧ್ಯಯನ ನಡೆಸಿ ನಂತರ ಸೇನೆಯ ಸೇವೆಗೆ ಮರಳುವ ಮುನ್ನ ಗ್ರೀನ್‌ವಿಚ್‌ನಲ್ಲಿ ಸಂಕ್ಷಿಪ್ತವಾಗಿ ವಿದ್ಯುನ್ಮಾನ ತಂತ್ರಜ್ಞಾನದ ಅಧ್ಯಯನವನ್ನು ಮೌಂಟ್‌‌ಬ್ಯಾಟನ್‌‌ ಕೈಗೊಂಡನು. ವಿದ್ಯುನ್ಮಾನ ಅಥವಾ ಮಾಹಿತಿ ತಂತ್ರಜ್ಞಾನಗಳ ಉತ್ತೇಜನೆ ಹಾಗೂ ಅವುಗಳ ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಮಾಡಿದ ಅಭೂತಪೂರ್ವಕೊಡುಗೆ ಅಥವಾ ನಿರ್ದಿಷ್ಟ ಅವಧಿಯಲ್ಲಿ ನೀಡಲಾದ ಕೊಡುಗೆಗಳಿಗೆ ವಾರ್ಷಿಕವಾಗಿ ನೀಡಲಾಗುವ ಮೌಂಟ್‌‌ಬ್ಯಾಟನ್‌‌ ಪದಕವನ್ನು ನೀಡುವ ಸಂಸ್ಥೆ ಈಗಿನ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯು () ಮೊದಲು ಇನ್‌ಸ್ಟಿಟ್ಯೂಷನ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌ () ಎಂದು ಕರೆಸಿಕೊಳ್ಳುತ್ತಿದ್ದಾಗ ಮೌಂಟ್‌‌ಬ್ಯಾಟನ್‌‌ ಅದರ ಸದಸ್ಯರಾಗಿದ್ದರು. ೧೯೨೬ರಲ್ಲಿ, ಪ್ರಧಾನ ನೌಕಾಧಿಪತಿ ಸರ್‌ ರೋಜರ್‌ ಕೀಯೆಸ್‌ರ ಅಧಿಪತ್ಯದಡಿಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳದ ಸಹಾಯಕ ನಿಸ್ತಂತು ಹಾಗೂ ಸಂಕೇತತಜ್ಞ ಅಧಿಕಾರಿಯಾಗಿ ನೇಮಿಸಲಾಗಿತ್ತು. ೧೯೨೯ರಲ್ಲಿ ಸಿಗ್ನಲ್‌ ಶಾಲೆಗೆ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಹಿರಿಯ ನಿಸ್ತಂತು ಬೋಧಕರಾಗಿ ಮರಳಿದರು. ೧೯೩೧ರಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ನೌಕಾದಳೀಯ ನಿಸ್ತಂತು ಅಧಿಕಾರಿಯಾಗಿ ನೇಮಕವಾದಾಗ ಮತ್ತೊಮ್ಮೆ ಅವರನ್ನು ಸೇನಾಪಡೆಯ ಸೇವೆಗೆ ಕರೆಸಿಕೊಳ್ಳಲಾಯಿತು. ಈ ಸಮಯದಲ್ಲಿಯೇ ಅವರು ಮಾಲ್ಟಾದಲ್ಲಿ ಒಂದು ಸಂಕೇತ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದುದು ಹಾಗೂ ನೌಕಾದಳದ ಎಲ್ಲಾ ರೇಡಿಯೋ ಆಪರೇಟರ್‌ಗಳೊಂದಿಗೆ ಪರಿಚಯವನ್ನು ಮಾಡಿಕೊಂಡುದುದಾಗಿತ್ತು. ಮೌಂಟ್‌‌ಬ್ಯಾಟನ್‌‌ರನ್ನು ಅವರ ಮೊತ್ತ ಮೊದಲ ಸೇನಾಧಿಪತ್ಯ ಸ್ಥಾನಕ್ಕೆ ೧೯೩೪ರಲ್ಲಿ ನೇಮಿಸಲಾಯಿತು. ಅವರ ನೌಕೆಯು ಒಂದು ವಿಧ್ವಂಸಕ ನೌಕೆಯಾಗಿದ್ದು ಅದರಲ್ಲಿ ಅವರು ಸಿಂಗಪೂರ್‌‌ಗೆ ತೆರಳಿ ಹಳೆಯ ಹಡಗೊಂದರ ಜೊತೆ ವಿನಿಮಯ ಮಾಡಿಕೊಂಡು ಬರಬೇಕಿತ್ತು. ಅವರು ಮಾಲ್ಟಾದಲ್ಲಿನ ಬಂದರಿಗೆ ಯಶಸ್ವಿಯಾಗಿಯೇ ಹಳೆಯ ಹಡಗನ್ನು ಮರಳಿ ತಂದರು. ೧೯೩೬ರ ವೇಳೆಗೆ ಮೌಂಟ್‌‌ಬ್ಯಾಟನ್‌‌ ವೈಟ್‌ಹಾಲ್‌ನಲ್ಲಿನ ನೌಕಾಧಿಪತ್ಯದ ಕಚೇರಿಗೆ ನೇಮಕಗೊಂಡಿದ್ದರು ಹಾಗೂ ನೌಕಾಪಡೆಯ ವಾಯುಯಾನ ಶಾಖೆಯ ಸದಸ್ಯರೂ ಆಗಿದ್ದರು. ==== ಹಕ್ಕುಸ್ವಾಮ್ಯಪತ್ರ ==== ೧೯೩೦ರ ದಶಕದ ಅಂತ್ಯದ ವೇಳೆಗೆ ಮತ್ತೊಂದು ಹಡಗಿಗೆ ಸಾಪೇಕ್ಷವಾಗಿ ಸ್ಥಿರ ನೆಲೆಯಲ್ಲಿ ಯುದ್ಧನೌಕೆಯನ್ನು ನಿಲ್ಲಿಸಿಕೊಳ್ಳುವ ತಂತ್ರಜ್ಞಾನದ ವ್ಯವಸ್ಥೆಗೆ ಮೌಂಟ್‌‌ಬ್ಯಾಟನ್‌‌ರಿಗೆ ತಮ್ಮ ೨ನೆಯ ಹಕ್ಕುಸ್ವಾಮ್ಯವನ್ನು ( ಸಂಖ್ಯೆ ೫೦೮,೯೫೬) ನೀಡಲಾಗಿತ್ತು. === ದ್ವಿತೀಯ ಜಾಗತಿಕ ಸಮರ === ೧೯೩೯ರಲ್ಲಿ ವಿಶ್ವ ಸಮರ ಘೋಷಣೆಯಾದಾಗ ಮೌಂಟ್‌‌ಬ್ಯಾಟನ್‌‌ರನ್ನು ಅನೇಕ ಕೆಚ್ಚೆದೆಯ ಹೋರಾಟಗಳಿಂದಾಗಿ ಹೆಸರು ಮಾಡಿದ್ದ ತನ್ನ ಹಡಗು ಕೆಲ್ಲಿಯಿಂದಲೇ ಕಾರ್ಯಾಚರಣೆಗಿಳಿಯುವಂತೆ ೫ನೆಯ ವಿಧ್ವಂಸಕ ಲಘು ನೌಕಾ ವ್ಯೂಹದ ದಳಪತಿಯಾಗಿ ನೇಮಕಗೊಳಿಸಿ ಮತ್ತೆ ಸಕ್ರಿಯ ಸೇನಾಪಡೆಯ ಸೇವೆಗೆ ಕರೆಸಲಾಯಿತು. ೧೯೪೦ರ ಮೇ ತಿಂಗಳ ಆರಂಭದಲ್ಲಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಬೆಂಗಾವಲು ನೌಕಾಪಡೆಯನ್ನು ನಾಮ್‌ಸೋಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಿತ್ರಪಡೆಗಳನ್ನು ತೆರವುಗೊಳಿಸಲು ಹಿಮಾವೃತವಾಗಿದ್ದ ಪ್ರದೇಶದ ಮೂಲಕ ಮುನ್ನಡೆಸಿದ್ದರು. ೧೯೪೦ರ ಇಸವಿಯಲ್ಲಿಯೇ ನೌಕಾದಳೀಯ ಛದ್ಮವೇಷಕ್ಕೆ ಬಳಸುವ ಮೌಂಟ್‌‌ಬ್ಯಾಟನ್‌‌ ಗುಲಾಬಿ ವರ್ಣವನ್ನು ಅವರು ಕಂಡುಹಿಡಿದದ್ದು. ಕ್ರೀಟೆ ಕಾಳಗದ ಅವಧಿಯಲ್ಲಿ ೧೯೪೧ರ ಮೇ ತಿಂಗಳಲ್ಲಿ ಆತನ ಹಡಗು ಮುಳುಗಿಹೋಗಿತ್ತು. ಆಗಸ್ಟ್‌‌ ೧೯೪೧ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಜನವರಿಯಲ್ಲಿ ಮೆಡಿಟರೇನಿಯನ್‌ ಸಮುದ್ರ ಪ್ರದೇಶದ ಮಾಲ್ಟಾದಲ್ಲಿ ನಡೆಸಿದ ಕಾರ್ಯಾಚರಣೆಯ ನಂತರ ಕೈಗೊಳ್ಳಬೇಕಾಗಿ ಬಂದ ದುರಸ್ತಿ ಕಾರ್ಯಗಳಿಗಾಗಿ ವರ್ಜೀನಿಯಾದ ನಾರ್‌ಫೋಕ್‌‌ನಲ್ಲಿದ್ದ ಇಲ್ಲಸ್ಟ್ರಿಯಸ್‌ ನೌಕೆ ಯ ಕಪ್ತಾನ/ನಾಯಕನನ್ನಾಗಿ ನೇಮಿಸಲಾಯಿತು. ಸಾಪೇಕ್ಷವಾಗಿ ಸೈನಿಕ ಕಾರ್ಯಾಚರಣೆಗಳಿರದಿದ್ದ ಈ ಅವಧಿಯಲ್ಲಿ ಅವರು ಪರ್ಲ್‌ ಹಾರ್ಬರ್‌ ಬಂದರಿಗೆ ಅಲ್ಪಾವಧಿಯ ಭೇಟಿ ನೀಡಿದಾಗ ಅಲ್ಲಿನ ಕಳಪೆ ಸಿದ್ಧತೆಯ ಸ್ಥಿತಿ ಹಾಗೂ ಜಂಟಿ HQಯ ಕೊರತೆಯೊಂದಿಗೆ ನೌಕಾಪಡೆ ಮತ್ತು ಸೇನಾಪಡೆಗಳ ನಡುವಿನ ಸಾಧಾರಣ ಸಹಕಾರಕ್ಕೂ ಕೊರತೆಯಿರುವುದನ್ನು ಮನಗಂಡು ಅಷ್ಟೇನೂ ಪ್ರಭಾವಿತರಾಗಲಿಲ್ಲ. ಮೌಂಟ್‌‌ಬ್ಯಾಟನ್‌‌ರು ವಿನ್‌‌ಸ್ಟನ್‌‌ ಚರ್ಚಿಲ್‌‌ರಿಗೆ ಅಚ್ಚುಮೆಚ್ಚಿನವರಾಗಿದ್ದು (೧೯೪೮ರ ನಂತರ ಮೌಂಟ್‌‌ಬ್ಯಾಟನ್‌‌ರು ನಂತರ ಭಾರತ ಮತ್ತು ಪಾಕಿಸ್ತಾನಗಳ ಸ್ವಾತಂತ್ರ್ಯ ಗಳಿಕೆಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಜನಪ್ರಿಯತೆ ಪಡೆದುದರಿಂದ ಮುಜುಗರಗೊಂಡಿದ್ದ ಕಾರಣ ಚರ್ಚಿಲ್‌‌ ಮತ್ತೆಂದೂ ಅವರೊಂದಿಗೆ ಮಾತಾಡಲಿಲ್ಲ), ೨೭ ಅಕ್ಟೋಬರ್‌‌ ೧೯೪೧ರಂದು ಮೌಂಟ್‌‌ಬ್ಯಾಟನ್‌‌ ಸಂಯುಕ್ತ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ರೋಜರ್‌ ಕೀಯೆಸ್‌ರಿಂದ ಅಧಿಕಾರ ವಹಿಸಿಕೊಂಡರು. ಇಂಗ್ಲಿಷ್‌ ಕಾಲುವೆಯ ಆದ್ಯಂತ ಕ್ಷಿಪ್ರದಾಳಿ ತಂಡಗಳ ದಾಳಿಗಳನ್ನು ಯೋಜಿಸುವುದು ಹಾಗೂ ಪ್ರತಿರೋಧ ಕಂಡುಬರುವ ತೀರಗಳಲ್ಲಿ ಇಳಿಯಲು ಅನುಕೂಲವಾಗುವಂತೆ ತಾಂತ್ರಿಕ ಸಾಧನೋಪಾಯಗಳನ್ನು ಕಂಡುಹಿಡಿಯುವುದು ಈ ಹುದ್ದೆಯ ಕರ್ತವ್ಯವಾಗಿತ್ತು. ಮೌಂಟ್‌‌ಬ್ಯಾಟನ್‌ರು‌ ೧೯೪೨ರ ಮಧ್ಯಭಾಗದಲ್ಲಿ ನಡೆದ . ನಝೈರೆ ಎಂಬಲ್ಲಿನ ದ ರೈಡ್‌ ದಾಳಿಯ ಯೋಜನೆ ಹಾಗೂ ಏರ್ಪಾಟಿಗೆ ಬಹುಪಾಲು ಜವಾಬ್ದಾರರಾಗಿದ್ದರು : ಈ ಕಾರ್ಯಾಚರಣೆಯು ಬಹುಮಟ್ಟಿಗೆ ಯುದ್ಧವು ಕೊನೆಗೊಳ್ಳುವವರೆಗೆ ನಾಝಿ ಆಕ್ರಮಿತ ಫ್ರಾನ್ಸ್‌‌ನಲ್ಲಿನ ಬಹುವಾಗಿ ರಕ್ಷಿಸಲ್ಪಟ್ಟ ಹಡಗುಕಟ್ಟೆಗಳಲ್ಲಿ ಒಂದಾಗಿದ್ದ ಹಡಗುಕಟ್ಟೆಯನ್ನು ಬಳಕೆಗೆ ಅನರ್ಹವಾಗುವಂತೆ ಮಾಡಿತ್ತು, ಇದರಿಂದುಂಟಾದ ಹಾನಿಯು ವಿಸ್ತರಿಸುತ್ತಾ ಹೋಗಿ ಅಟ್ಲಾಂಟಿಕ್‌ ಕಾಳಗದಲ್ಲಿ ಮಿತ್ರ ಪಡೆಗಳು ವಿಜಯಶಾಲಿಯಾಗುವುದಕ್ಕೆ ಪ್ರಧಾನ ಕೊಡುಗೆ ನೀಡಿತ್ತು. ೧೯ ಆಗಸ್ಟ್‌‌ ೧೯೪೨ರಂದು ನಡೆಸಲಾದ ಅನರ್ಥಕಾರಿ ಡಿಯೆಪ್ಪೆ ದಾಳಿಯನ್ನು ಅವರು ವೈಯಕ್ತಿಕವಾಗಿಯೇ ಸಂಘಟಿಸಿದ್ದರು (ಈ ಕಾರ್ಯಾಚರಣೆಯನ್ನು ಮಿತ್ರಪಡೆಗಳ ಸೇನೆಯ ಕೆಲ ವ್ಯಕ್ತಿಗಳು, ಗಮನಾರ್ಹವಾಗಿ ಫೀಲ್ಡ್‌ ಮಾರ್ಷಲ್‌‌ ಮಾಂಟ್‌ಗೋಮೆರಿಯವರು ನಂತರ ವ್ಯಕ್ತಪಡಿಸಿದ ಅಭಿಪ್ರಾಯದ ಪ್ರಕಾರ ಈ ದಾಳಿಯು ಮೊದಲಿನಿಂದಲೇ ದುರುದ್ದೇಶದಿಂದ ಕೂಡಿತ್ತು. ಆದಾಗ್ಯೂ ..Aನಲ್ಲಿ ೧೯೪೨ರ ಆದಿಯಲ್ಲಿ ನಡೆದ ಸಭೆಯೊಂದರಲ್ಲಿ ದಾರಿಗಳು ಮುಚ್ಚಿಹೋಗುವ ಸಂಭವವಿರುವುದರಿಂದ ಆಕ್ರಮಿಸುವ ಮುನ್ನ ಡಿಯೆಪ್ಪೆ‌ ಬಂದರಿನ ಮೇಲೆ ತೀವ್ರತರವಾದ ಬಾಂಬ್‌ ದಾಳಿಗಳನ್ನು ಮಾಡುವುದು ಬೇಡವೆಂದು ನಿರ್ಧರಿಸಲಾಗಿತ್ತು ಈ ಸಭೆಯ ಅಧ್ಯಕ್ಷ ಸ್ಥಾನದಲ್ಲಿದ್ದ ಮಾಂಟ್‌ಗೋಮೆರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ). ಡಿಯೆಪ್ಪೆ‌ ಬಂದರಿನ ಮೇಲಿನ ಆಕ್ರಮಣವು ದುರಂತದ ಕಾರ್ಯಾಚರಣೆಯಾಗಿತ್ತೆಂಬ ಅಭಿಪ್ರಾಯವು ವ್ಯಾಪಕವಾಗಿದ್ದು ಈ ದುರ್ಘಟನೆಯಿಂದ ಪೀಡಿತರಾದವರ ಸಂಖ್ಯೆಯು (ಗಾಯಗೊಂಡವರು ಹಾಗೂ/ಅಥವಾ ಸೆರೆಯಾಳುಗಳಾದವರುಗಳನ್ನು ಸೇರಿಸಿದಂತೆ) ಸಾವಿರಗಳಲ್ಲಿದ್ದು, ಅವರಲ್ಲಿ ಬಹುಪಾಲು ಜನರು ಕೆನಡಾದವರಾಗಿದ್ದರು. ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌ ವಿಲ್ಲಾ ಎಂಬಾತನು ಮೌಂಟ್‌‌ಬ್ಯಾಟನ್‌‌ ಈ ಆಕ್ರಮಣವನ್ನು ತನ್ನ ಅಧಿಕಾರವ್ಯಾಪ್ತಿಯನ್ನು ಮೀರಿಯೇ ಸಂಘಟಿಸಿದ್ದುದಾದರೂ, ಆತ ಹಾಗೆ ಮಾಡಲುದ್ದೇಶಿಸಿದ್ದುದು ಆತನ ವರಿಷ್ಠರಲ್ಲಿ ಹಲವರಿಗೆ ತಿಳಿದಿತ್ತಾದರೂ ಅವರು ಆತನನ್ನು ತಡೆಯಲು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದನು. ಮೌಂಟ್‌‌ಬ್ಯಾಟನ್‌‌ ಹಾಗೂ ಆತನ ಸಿಬ್ಬಂದಿಯ ಮೂರು ಗಮನಾರ್ಹ ತಾಂತ್ರಿಕ ಸಾಧನೆಗಳಲ್ಲಿ ಈ ಕೆಳಕಂಡವು ಸೇರಿವೆ : (೧) ಇಂಗ್ಲಿಷ್‌ ಕಾಲುವೆಯಿಂದ ನಾರ್ಮಂಡಿಯವರೆಗೆ ನೀರೊಳಗಿನ ತೈಲ ಕೊಳಾಯಿ ಮಾರ್ಗದ ನಿರ್ಮಾಣ, (೨) ಗಾರೆಯ ದೋಣಿ ಬಾಗಿಲುಗಳು ಹಾಗೂ ಮುಳುಗಿದ್ದ ಹಡಗುಗಳನ್ನು ಬಳಸಿ ಕೃತಕ ಬಂದರಿನ ನಿರ್ಮಾಣ ಮತ್ತು (೩) ಭೂಜಲಗಳೆರಡರಲ್ಲಿಯೂ ಕಾರ್ಯಾಚರಿಸಬಲ್ಲ ಫಿರಂಗಿ-ಅವರೋಹ ನಾವೆಗಳ ಅಭಿವೃದ್ಧಿ. ಚರ್ಚಿಲ್‌‌ರ ಮುಂದಿಡಲಾಗಿದ್ದ ಮೌಂಟ್‌‌ಬ್ಯಾಟನ್‌‌ರ ಮತ್ತೊಂದು ಯೋಜನೆಯೆಂದರೆ ಹಬಾಕ್ಕುಕ್‌‌ ಯೋಜನೆಯಾಗಿತ್ತು. ಇದೊಂದು ಬಲವರ್ಧಿತ ಮಂಜುಗೆಡ್ಡೆ ಅಥವಾ "ಪೈಕ್ರೆಟೆ "ಯಿಂದ ನಿರ್ಮಿತವಾದ ಅಭೇದ್ಯವಾದ ೬೦೦ ಮೀಟರ್‌ಗಳಷ್ಟು ಉದ್ದದ ವಿಮಾನ ವಾಹಕ ಭಾರೀ ಗಾತ್ರದ ಹಡಗಾಗಿತ್ತು. ತನ್ನ ನಿರ್ಮಾಣಕ್ಕೆ ತಗಲುವ ಭಾರೀ ವೆಚ್ಚದಿಂದಾಗಿ ಹಬಾಕ್ಕುಕ್‌‌ಅನ್ನು ಕಾರ್ಯಗತಗೊಳಿಸಲಾಗಿರಲಿಲ್ಲ. ಸ್ಥೂಲವಾಗಿ ಎರಡು ವರ್ಷಗಳ ನಂತರ -ದಿನದಂದು ಕೈಗೊಳ್ಳಲಾದ ನಾರ್ಮಂಡಿ ಆಕ್ರಮಣವನ್ನು ಯೋಜಿಸಲು ಡಿಯೆಪ್ಪೆ‌ ಆಕ್ರಮಣದಿಂದ ಕಲಿತ ಪಾಠಗಳು ಅನಿವಾರ್ಯವಾಗಿದ್ದವು ಎಂದು ಮೌಂಟ್‌‌ಬ್ಯಾಟನ್‌‌ ಹೇಳಿಕೊಂಡಿದ್ದರು. ಆದಾಗ್ಯೂ ಬ್ರಿಟನ್ನಿನ ಮಾಜಿ ನೌಕಾಯೋಧ ಜ್ಯೂಲಿಯನ್‌‌‌ ಥಾಂಪ್ಸನ್‌‌ನಂತಹಾ ಸೈನಿಕ ಇತಿಹಾಸಕಾರರುಗಳು ಅಂತಹಾ ಪಾಠಗಳನ್ನು ಕಲಿಯಲು ಡಿಯೆಪ್ಪೆ‌ಯಂತಹಾ ಅನಾಹುತಗಳಿಂದ ಪಡೆಯುವ ಮನ್ನಣೆಯ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಅದೇನೇ ಇರಲಿ ಡಿಯೆಪ್ಪೆ‌ ಆಕ್ರಮಣದ ವಿಫಲತೆಗಳ ನೇರ ಪರಿಣಾಮವಾಗಿ, ಬ್ರಿಟಿಷರು ಹಲವು ನವೀನ ತಂತ್ರಜ್ಞಾನಗಳನ್ನು ಕೈವಶ ಮಾಡಿಕೊಂಡರು - ಅವುಗಳಲ್ಲಿ ಬಹು ಗಮನಾರ್ಹವಾದುದೆಂದರೆ ಹೋಬರ್ಟ್‌ಸ್‌ ಫನ್ನೀಸ್‌ ಆಗಿದ್ದು - ನಾರ್ಮಂಡಿ ಬಂದರಿನಲ್ಲಿನ ಇಳಿಯುವಿಕೆಗಳ ಸಮಯದಲ್ಲಿ ಕಾಮನ್‌ವೆಲ್ತ್‌‌ ಸೈನಿಕರುಗಳು ಇಳಿಯುತ್ತಿದ್ದ ಮೂರು ಕರಾವಳಿ ನೆಲೆಗಳಲ್ಲಿ (ಗೋಲ್ಡ್‌‌ ತೀರ, ಜುನೋ‌ ತೀರ ಮತ್ತು ಸ್ವಾರ್ಡ್‌‌ ತೀರ) ನಿಸ್ಸಂಶಯವಾಗಿ ಹಲವು ಜೀವಗಳನ್ನು ಉಳಿಸಿತು. ಡಿಯೆಪ್ಪೆ‌ ಆಕ್ರಮಣದ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರು ಕೆನಡಾದಲ್ಲಿ ವಿವಾದಾಸ್ಪದ ವ್ಯಕ್ತಿಯಾಗಿ ಮಾರ್ಪಟ್ಟರು, ತನ್ನ ನಂತರದ ವೃತ್ತಿಜೀವನದ ಅವಧಿಯಲ್ಲಿ ಅಲ್ಲಿಗೆ ನೀಡಿದ ಭೇಟಿಯ ಸಮಯಗಳಲ್ಲಿ ಕೆನಡಾದ ರಾಜ ತುಕಡಿಗಳು ತಮ್ಮನ್ನು ಅವರಿಂದ ದೂರವಿಟ್ಟುಕೊಂಡಿದ್ದರು ; ಕೆನಡಾದ ಪರಿಣತ ಸೈನಿಕರೊಂದಿಗಿನ ಅವರ ಸಂಬಂಧಗಳು "ಕಹಿತನವನ್ನು ಉಳಿಸಿಕೊಂಡಿತ್ತು". ಅದೇನೇ ಇದ್ದರೂ ಕೆನಡಾದ ನೌಕಾದಳೀಯ ಸೈನಿಕ ಪಡೆಯೊಂದಕ್ಕೆ ( #೧೩೪ ಒಂಟಾರಿಯೋದ ಸಡ್‌ಬರಿನಲ್ಲಿನ ಅಡ್ಮೀರಲ್‌‌ ಮೌಂಟ್‌‌ಬ್ಯಾಟನ್‌‌) ೧೯೪೬ರಲ್ಲಿ ಆತನ ಹೆಸರಿಡಲಾಗಿತ್ತು. ಅಕ್ಟೋಬರ್‌‌ ೧೯೪೩ರಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಆಗ್ನೇಯ ಏಷ್ಯಾದ ಸೈನ್ಯ ತುಕಡಿಯ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿ ಚರ್ಚಿಲ್‌‌ರು ನೇಮಕ ಮಾಡಿದ್ದರು. ಆತನ ಅಷ್ಟೇನೂ ಕಾರ್ಯಸಮರ್ಥವಲ್ಲದ ಯೋಜನೆಗಳನ್ನು -. ಜೇಮ್ಸ್‌ ಅಲ್ಲೇಸನ್‌‌ರ ನೇತೃತ್ವದಡಿಯ ಅನುಭವಪೂರ್ಣ ಯೋಜನಾ ಸಿಬ್ಬಂದಿ ತಳ್ಳಿಹಾಕುತ್ತಿದ್ದರು, ಇಷ್ಟಾದರೂ ರಂಗೂನ್‌‌‌ ಬಳಿಯ ಭೂಜಲ ಪ್ರದೇಶಗಳ ಮೇಲಿನ ಆಕ್ರಮಣದಂತಹಾ ಕೆಲವು ಪ್ರಸ್ತಾಪಗಳು ತಿರಸ್ಕೃತಗೊಳ್ಳುವ ಮುನ್ನ ಚರ್ಚಿಲ್‌‌ರವರನ್ನು ಕೂಡಾ ತಲುಪಿರುತ್ತಿದ್ದವು. ೧೯೪೬ರಲ್ಲಿ ಆಗ್ನೇಯ ಏಷ್ಯಾದ ಸೈನಿಕ ತುಕಡಿಯನ್ನು () ವಿಸರ್ಜಿಸುವವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರೆದಿದ್ದರು. ಆಗ್ನೇಯ ಏಷ್ಯಾದ ಯುದ್ಧಕ್ಷೇತ್ರದ ಪ್ರಧಾನ ಮೈತ್ರಿಪಡೆಯ ಸೇನಾಪತಿಯಾಗಿದ್ದ ಅವಧಿಯಲ್ಲಿ ಆತನ ತುಕಡಿಯು ಜಪಾನೀಯರಿಂದ ಬರ್ಮಾವನ್ನು ಮತ್ತೆ ಸೈನ್ಯಾಧಿಪತಿ ವಿಲಿಯಂ ಸ್ಲಿಮ್‌‌ರ ನೇತೃತ್ವದಡಿಯಲ್ಲಿ ವಶಪಡಿಸಿಕೊಂಡಿತು. ತನ್ನ ಪ್ರತಿನಿಧಿ ಹಾಗೂ ಅಮೇರಿಕನ್‌ ಚೀನಾ ಬರ್ಮಾ ಭಾರತೀಯ ಯುದ್ಧಕ್ಷೇತ್ರದ ನೇತೃತ್ವವನ್ನು ವಹಿಸಿದ್ದ ಅಧಿಕಾರಿ ಸೈನ್ಯಾಧಿಪತಿ "ವಿನೆಗರ್‌ ಜೋ " ಸ್ಟಿಲ್‌ವೆಲ್‌ -- ಮತ್ತು ಚೀನೀಯ ರಾಷ್ಟ್ರೀಯತಾವಾದಿ ಸೇನಾಪಡೆಯ ನಾಯಕ ಮಹಾಸೇನಾಧಿಪತಿ ಚಿಯಾಂಗ್‌‌ ಕೈ-ಷೆಕ್‌‌ರವರುಗಳೊಂದಿಗಿನ ರಾಜತಾಂತ್ರಿಕ ನಡಾವಳಿಗಳು ಸೈನ್ಯಾಧಿಪತಿ ಮಾಂಟ್‌ಗೋಮೆರಿ ಮತ್ತು ವಿನ್‌‌ಸ್ಟನ್‌‌ ಚರ್ಚಿಲ್‌‌ರವರುಗಳೊಡನೆ ಸೈನ್ಯಾಧಿಪತಿ ಐಸೆನ್‌ಹೋವರ್‌‌ ಹೊಂದಿದ್ದ ನಡಾವಳಿಗಳಷ್ಟೇ ಉಪಯುಕ್ತವಾಗಿತ್ತು. ಇದರಲ್ಲಿ ಅವರು ಪಡೆದ ವೈಯಕ್ತಿಕ ಮೇಲುಗೈಯೆಂದರೆ ಸೈನ್ಯಾಧಿಪತಿ ಇಟಾಗಾಕಿ ಸೇಷಿರೋರ ನೇತೃತ್ವದ ಜಪಾನೀಯ ಪಡೆಗಳ ಔಪಚಾರಿಕ ಶರಣಾಗತಿಯನ್ನು ಪಡೆಯಲು ಬ್ರಿಟಿಷ್‌‌ ಪಡೆಗಳು ದ್ವೀಪಪ್ರದೇಶಕ್ಕೆ ಮರಳಿ ಬಂದಾಗ ೧೨ ಸೆಪ್ಟೆಂಬರ್‌‌ ೧೯೪೫ರಂದು ಆಪರೇಷನ್‌ ಟೈಡ್‌ರೇಸ್‌‌ ಎಂಬ ಸಂಕೇತನಾಮದ ಕಾರ್ಯಾಚರಣೆಯಲ್ಲಿ ಸಿಂಗಪೂರ್‌‌ನಲ್ಲಿ ಜಪಾನೀಯರ ಶರಣಾಗತಿಯನ್ನು ಪಡೆದುದಾಗಿತ್ತು. === ಕೊನೆಯ ವೈಸ್‌‌ರಾಯ್‌‌ === ಈ ಪ್ರದೇಶದಲ್ಲಿನ ಅನುಭವ ಹಾಗೂ ನಿರ್ದಿಷ್ಟವಾಗಿ ಆ ಕಾಲಾವಧಿಯಲ್ಲಿ ಆತನು ನೌಕರರ ಮನಸ್ಥಿತಿಯ ಬಗ್ಗೆ ಪಡೆದಿದ್ದ ಗ್ರಹಿಕೆಯು ಸಮರಾನಂತರ ಕ್ಲೆಮೆಂಟ್‌ ಆಟ್ಲೀ ಭಾರತದ ವೈಸ್‌‌ರಾಯ್‌‌ ಆಗಿ ಆತನನ್ನು ನೇಮಕ ಮಾಡುವುದಕ್ಕೆ ಕಾರಣವಾಯಿತು ಬ್ರಿಟಿಷ್‌‌ ಭಾರತವು ಸ್ವಾತಂತ್ರ್ಯವನ್ನು ೧೯೪೮ಕ್ಕಿಂತ ಮುಂಚೆಯೇ ಹೊಂದುವುದರ ಜವಾಬ್ದಾರಿಯನ್ನು ಆತನ ಮೇಲೆ ಹೊರಿಸಲಾಗಿತ್ತು. ಮೌಂಟ್‌‌ಬ್ಯಾಟನ್‌‌ರ ನೀಡಿದ ಸೂಚನೆಗಳು ಅಧಿಕಾರದ ಹಸ್ತಾಂತರದ ಪರಿಣಾಮವಾಗಿ ಭಾರತದ ಸಮಗ್ರತೆಯನ್ನು ಎತ್ತಿಹಿಡಿದರೂ ಹಸ್ತಾಂತರದ ನಂತರ ಬ್ರಿಟನ್‌‌‌ ಪಡೆಗಳು ತನ್ನ ಗೌರವಕ್ಕೆ ಉಂಟಾಗಬಹುದಾದ ಧಕ್ಕೆಯನ್ನು ಕನಿಷ್ಟ ಮಟ್ಟಕ್ಕೆ ಇಳಿಸಿಕೊಳ್ಳುವ ಹಾಗೆ ಬದಲಾದ ಸ್ಥಿತಿಗೆ ಹೊಂದುವ ಹಾಗೆ ನಡೆದುಕೊಳ್ಳಲು ಆತನಿಗೆ ಅಧಿಕಾರ ನೀಡಲಾಗಿತ್ತು. ಈತನು ನಿಗದಿಪಡಿಸಿದ್ದ ಆದ್ಯತೆಗಳು ಭಾರತದ ಸ್ವಾತಂತ್ರ್ಯದ ಬಗ್ಗೆ ಚರ್ಚೆಗಳು ನಡೆಯುವಾಗ ವ್ಯವಹಾರಗಳು ಕೈಗೂಡುವ ರೀತಿಯ ಮೇಲೆ ಪರಿಣಾಮ ಬೀರಿದವು, ಅದರಲ್ಲೂ ವಿಶೇಷವಾಗಿ ಹಿಂದೂಗಳು ಹಾಗೂ ಮುಸಲ್ಮಾನರ ವಿಭಜಿತ ಬಣಗಳ ನಡುವೆ ಇದು ಪರಿಣಾಮ ಬೀರಿತ್ತು. ಮೌಂಟ್‌‌ಬ್ಯಾಟನ್‌‌ರು ಕಾಂಗ್ರೆಸ್‌‌ ನಾಯಕ ನೆಹರೂ ಹಾಗೂ ರಾಷ್ಟ್ರದ ಬಗೆಗಿನ ಅವರ ಉದಾರೀಕರಣ ನೀತಿಯ ಬಗ್ಗೆ ಒಲವನ್ನು ಹೊಂದಿದ್ದರು. ಆದರೆ ಆತ ಮುಸಲ್ಮಾನ ನಾಯಕ ಜಿನ್ನಾರ ಬಗ್ಗೆ ಬೇರೆಯೇ ಭಾವನೆಯನ್ನು ಹೊಂದಿದ್ದರೂ, ಆತನ ಶಕ್ತಿಯ ಬಗ್ಗೆ ಅರಿವನ್ನು ಹೊಂದಿದ್ದರು, ಅದನ್ನು ಹೀಗೆ ವ್ಯಕ್ತಪಡಿಸಿದ್ದರೂ ಕೂಡಾ " ೧೯೪೭ರಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಕೈಗಳಿಗೆ ಭಾರತದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆ ಎಂಬುದನ್ನು ಹೇಳಬಹುದಾದರೆ ಆ ವ್ಯಕ್ತಿ ಮೊಹಮ್ಮದ್‌‌ ಅಲಿ ಜಿನ್ನಾ ಆಗಿದ್ದಾರೆ". ಸಮಗ್ರ ಭಾರತದಲ್ಲಿ ಮುಸಲ್ಮಾನರ ಪ್ರಾತಿನಿಧಿತ್ವದ ಬಗ್ಗೆ ಜಿನ್ನಾ ವಾದಿಸುತ್ತಿದ್ದರೆ, ನೆಹರೂ ಹಾಗೂ ಬ್ರಿಟಿಷರು ‌ಇದರ ಬಗ್ಗೆ ಸಂಧಾನ ನಡೆಸಲು ಪ್ರಯತ್ನಿಸಿ ಹೈರಾಣಾಗಿದ್ದರು ಇದರ ಪರಿಣಾಮವಾಗಿ ಜಿನ್ನಾ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‌ ಎರಡೂ ಪಂಗಡಗಳು ಒಪ್ಪಬಹುದಾದ ಪರಿಹಾರವನ್ನು ಕಂಡುಕೊಳ್ಳುವ ಬದಲಿಗೆ ಮುಸಲ್ಮಾನರಿಗೆ ಅವರದೇ ಆದ ರಾಷ್ಟ್ರವನ್ನು ಕೊಟ್ಟುಬಿಡುವುದು ಉತ್ತಮವೆಂದು ಭಾವಿಸಿದರು. ಸ್ವಾತಂತ್ರ್ಯವನ್ನು ಆದಷ್ಟು ಬೇಗ ಕೊಟ್ಟು ಮರಳಲು ಬ್ರಿಟಿಷ್‌‌ ಸರ್ಕಾರದ ಆಗ್ರಹವು ಹೆಚ್ಚುತ್ತಾ ಹೋದಾಗ, ಸಮಗ್ರ ಭಾರತ ಎಂಬುದು ಒಂದು ಸಾಧಿಸಲಾಗದ ಗುರಿಯಾಗಿದೆ ಎಂದು ನಿಶ್ಚಯಿಸಿ ಸ್ವತಂತ್ರ ಭಾರತ ಹಾಗೂ ಪಾಕಿಸ್ತಾನವಾಗಿ ವಿಭಜನೆಯನ್ನು ಮಾಡುವ ಯೋಜನೆಗೆ ಮೌಂಟ್‌‌ಬ್ಯಾಟನ್‌‌ರು ತನ್ನನ್ನು ಒಪ್ಪಿಸಿಕೊಂಡರು. ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು, ಅದಕ್ಕೆ ಸಮರ್ಥನೆಯಾಗಿ ನಿರ್ದಿಷ್ಟಗೊಳಿಸಿದ ಗಡುವು ಭಾರತೀಯರಿಗೆ ತನ್ನ ಹಾಗೂ ಬ್ರಿಟಿಷ್‌‌ ಸರಕಾರವು ಕ್ಷಿಪ್ರ ಹಾಗೂ ಸಮರ್ಥ ಸ್ವಾತಂತ್ರ್ಯವನ್ನು ನೀಡುವ ಬಗ್ಗೆ ಹೊಂದಿರುವ ಮುತುವರ್ಜಿಯನ್ನು ಖಾತರಿಪಡಿಸಿ ಈ ಪ್ರಕ್ರಿಯೆಯು ಸ್ಥಗಿತಗೊಳಿಸಬಲ್ಲ ಯಾವುದೇ ಸಾಧ್ಯತೆಯಿಲ್ಲವೆಂದು ಮನಗಾಣಿಸುತ್ತದೆ ಎಂಬ ವಾದವನ್ನು ಮುಂದಿಟ್ಟರು. ಆತನು ಪರಿಸ್ಥಿತಿಯು ತೀರಾ ಅಸ್ತವ್ಯಸ್ತವಾಗಿರುವುದರಿಂದ ೧೯೪೭ಕ್ಕಿಂತ ತಡವಾಗಿ ನಿರ್ಧಾರ ಮಾಡುವುದು ಸಾಧ್ಯವಿರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಅವರು ಹೀಗೆ ತೀರ್ಮಾನವನ್ನು ಕೈಗೊಂಡುದುದು ಉಪಖಂಡದ ಜನರು ಅನಾಹುತಕಾರಿ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವಂತೆ ಮಾಡಿತು.ಅಧಿಕಾರ ಹಸ್ತಾಂತರದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಿಕೆಯು ಭಾರತೀಯ ಉಪಖಂಡದಲ್ಲಿ ಹಿಂದೆಂದೂ ಕಂಡರಿಯದಂತಹಾ ಭೀಕರ ಹಿಂಸಾಕೃತ್ಯಗಳು ಹಾಗೂ ಪ್ರತೀಕಾರದ ತೀವ್ರತೆಯನ್ನು ಉಂಟಾಗುವುದಕ್ಕೆ ಕಾರಣವಾಯಿತು. ಭಾರತೀಯ ನಾಯಕರುಗಳಲ್ಲಿ, ಗಾಂಧಿಯವರು ಸ್ಫುಟವಾಗಿಯೇ ಸಮಗ್ರ ಭಾರತವನ್ನು ಕಾಯ್ದುಕೊಳ್ಳಲು ಒತ್ತಾಯಿಸಿದರು ಹಾಗೂ ಒಂದಷ್ಟು ಕಾಲ ಈ ಗುರಿಯ ಬಗ್ಗೆ ಯಶಸ್ವಿಯಾಗಿ ಜನರನ್ನು ಒಟ್ಟುಗೂಡಿಸಿದರು ಕೂಡಾ. ಆದಾಗ್ಯೂ, ಮೌಂಟ್‌‌ಬ್ಯಾಟನ್‌‌ರು ನೀಡಿದ ಗಡುವು ವಾಸ್ತವವಾಗಿ ಸ್ವಾತಂತ್ರ್ಯವನ್ನು ತ್ವರಿತವಾಗಿ ಪಡೆದುಕೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದಾಗ ಜನರ ಮನೋಭಾವಗಳು ಬೇರೆಯೇ ದಿಕ್ಕನ್ನು ಹಿಡಿದವು. ಮೌಂಟ್‌‌ಬ್ಯಾಟನ್‌‌ರ ದೃಢ ನಿಶ್ಚಯವನ್ನು ಗಮನದಲ್ಲಿಟ್ಟುಕೊಂಡಾಗ ಮುಸ್ಲಿಮ್‌ ಲೀಗ್‌ಅನ್ನು ಒಪ್ಪಿಸುವಲ್ಲಿ ನೆಹರೂ ಹಾಗೂ ಪಟೇಲರ ಅಸಮರ್ಥತೆಗಳು ಹಾಗೂ ಕಡೆಯದಾಗಿ ಜಿನ್ನಾರ ಹಠಮಾರಿತನಗಳ ಪರಿಣಾಮವಾಗಿ ಎಲ್ಲಾ ಭಾರತೀಯ ಪಕ್ಷದ ನಾಯಕರು (ಗಾಂಧಿಯವರನ್ನು ಹೊರತುಪಡಿಸಿ) ಜಿನ್ನಾರ ಭಾರತ ವಿಭಜನೆಯ, ಯೋಜನೆಯ ನಿಲುವನ್ನು ಒಪ್ಪುವ ತೀರ್ಮಾನಕ್ಕೆ ಬರಬೇಕಾಯಿತು, ಇದರ ಪರಿಣಾಮವಾಗಿ ಮೌಂಟ್‌‌ಬ್ಯಾಟನ್‌‌ರ ಹೊಣೆಗಾರಿಕೆಯು ಕಡಿಮೆಯಾಯಿತು. ಇಂತಹಾ ಪರಿಸ್ಥಿತಿಯ ವ್ಯಂಗ್ಯದಿಂದಾಗಿ ಜಿನ್ನಾರಿಗೆ ಈ ಪರಿಸ್ಥಿತಿಯು ತಮಗೆ ಹೆಚ್ಚು ಅನುಕೂಲತೆಗಳನ್ನು ಗಳಿಸಿಕೊಳ್ಳುವ ಬಗ್ಗೆ ಚೌಕಾಸಿ ನಡೆಸುವ ಸಾಧನವಾಯಿತಲ್ಲದೇ ಅವರದೇ ಅಂತಿಮ ತೀರ್ಮಾನವೆಂಬ ಪರಿಸ್ಥಿತಿ ಏರ್ಪಡುವ ಹಾಗಾಯಿತು. ಮೌಂಟ್‌‌ಬ್ಯಾಟನ್‌‌ರು ನೇರವಾಗಿ ಬ್ರಿಟಿಷ್‌‌ ಆಳ್ವಿಕೆಯಡಿ ಬರದ ಭಾರತದ ಪ್ರಾಂತ್ಯಗಳ ಭಾರತೀಯ ಪ್ರಭುಗಳೊಂದಿಗೆ ಕೂಡಾ ಬಲವಾದ ಬಾಂಧವ್ಯವನ್ನು ಸ್ಥಾಪಿಸಿದ್ದರು. ಇತಿಹಾಸಕಾರ ರಾಮಚಂದ್ರ ಗುಹಾರವರು ತಮ್ಮ ಕೃತಿ 'ಇಂಡಿಯಾ ಆಫ್ಟರ್‌ ಗಾಂಧಿ'ಯಲ್ಲಿ ಹೇಳುವ ಪ್ರಕಾರ ಅಂತಹಾ ರಾಜರುಗಳಲ್ಲಿ ಬಹುತೇಕ ಮಂದಿ ಭಾರತೀಯ ಒಕ್ಕೂಟಕ್ಕೆ ಸೇರಿಕೊಳ್ಳುವುದರಿಂದಾಗುವ ಅನುಕೂಲತೆಗಳನ್ನು ತಿಳಿಸಿಕೊಟ್ಟು ಅವರ ಮನವೊಲಿಸುವಂತೆ ಮಾಡುವಲ್ಲಿ ಮೌಂಟ್‌‌ಬ್ಯಾಟನ್‌‌ರ ಮಧ್ಯಸ್ಥಿಕೆಯು ನಿರ್ಣಾಯಕ ಪಾತ್ರ ವಹಿಸಿತ್ತು. ಆದ್ದರಿಂದ ರಾಜಾಡಳಿತದ ಪ್ರಾಂತ್ಯಗಳ ಏಕೀಕರಣವು ಆತನ ಹಿರಿಮೆಯ ಧನಾತ್ಮಕ ಅಂಶಗಳಲ್ಲಿ ಒಂದೆಂದು ಭಾವಿಸಬಹುದಾಗಿದೆ. ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯವನ್ನು ೧೪ರ ರಾತ್ರಿ ಹಾಗೂ ೧೫ ಆಗಸ್ಟ್‌‌ ೧೯೪೭ರ ಅವಧಿಯಲ್ಲಿ ಪಡೆದುಕೊಂಡಾಗ, ಮೌಂಟ್‌‌ಬ್ಯಾಟನ್‌‌ ಜೂನ್‌‌ ೧೯೪೮ರವರೆಗೆ ಭಾರತದ ಪ್ರಪ್ರಥಮ ಮಹಾಮಂಡಲಾಧಿಪತಿಯಾಗಿ ಸೇವೆ ಸಲ್ಲಿಸುತ್ತಾ ಹತ್ತು ತಿಂಗಳ ಕಾಲ ನವ ದೆಹಲಿಯಲ್ಲಿಯೇ ಉಳಿದಿದ್ದರು. ಭಾರತದ ಸ್ವಾತಂತ್ರ್ಯ ಗಳಿಕೆಯಲ್ಲಿ ತಾನೇ ಬಿಂಬಿಸಿಕೊಂಡ ಮಹತ್ವದ ಪಾತ್ರವನ್ನು — ಗಮನಾರ್ಹವಾಗಿ "ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಅಡ್ಮಿರಲ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ಆಫ್‌ ಬರ್ಮಾ " ಎಂಬ ತನ್ನ ಅಳಿಯ ಲಾರ್ಡ್‌‌ ಬ್ರಾಬೌರ್ನೆನು ನಿರ್ಮಿಸಿದ್ದ ಕಿರುತೆರೆಯ ಸರಣಿಯಲ್ಲಿ ಹಾಗೂ ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ರ ನಿಜವಾಗಿ ಹೇಳುವುದಾದರೆ ಭಾವೋದ್ರೇಕಗೊಳಿಸುವ ಫ್ರೀಡಮ್‌ ಅಟ್‌ ಮಿಡ್‌ನೈಟ್‌ (ಈ ಕಾರ್ಯಕ್ರಮಕ್ಕೆ ಈತನೇ ಪ್ರಧಾನ ಮಾಹಿತಿದಾರನಾಗಿದ್ದರು)ಗಳಲ್ಲಿ ಬಿಂಬಿಸಿದಂತೆ ಕಾಣಿಸದ — ಆತನ ಚರಿತ್ರೆಯು ಬಹುಮಟ್ಟಿಗೆ ಮಿಶ್ರಿತ ನಡವಳಿಕೆಗಳನ್ನು ಹೊಂದಿದೆ ; ಒಂದು ಪ್ರಖ್ಯಾತವಾದ ದೃಷ್ಟಿಕೋನದ ಪ್ರಕಾರ ಆತನು ಸ್ವಾತಂತ್ರ್ಯವನ್ನು ನೀಡುವ ಪ್ರಕ್ರಿಯೆಯನ್ನು ಅನುಚಿತವಾಗಿ ಹಾಗೂ ಅಜಾಗರೂಕತೆಯಿಂದ ತ್ವರಿತಗೊಳಿಸಿದನು, ಇದರಿಂದ ವ್ಯಾಪಕ ಘರ್ಷಣೆಗಳುಂಟಾಗುತ್ತದೆ ಹಾಗೂ ಸಾವುನೋವುಗಳು ಉಂಟಾಗುತ್ತವೆಂಬುದು ತಿಳಿದಿದ್ದರೂ ಬ್ರಿಟಿಷರ ಆಳ್ವಿಕೆಯಡಿಯಲ್ಲಿ ಹಾಗಾಗುವುದನ್ನು ಇಚ್ಛಿಸದೇ, ಆದರೂ ವಾಸ್ತವವಾಗಿ ಹಾಗೆ ಗಲಭೆ ಉಂಟಾಗುವುದಕ್ಕೆ ಅದರಲ್ಲೂ ವಿಶೇಷವಾಗಿ ಪಂಜಾಬ್‌ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಘರ್ಷಣೆಗಳುಂಟಾಗುವುದಕ್ಕೆ ಕಾರಣನಾದನು. ಹೀಗೆ ಪ್ರತಿಪಾದಿಸುವ ವಿಮರ್ಶಕರು ಸ್ವಾತಂತ್ರ್ಯವನ್ನು ಪಡೆಯುವ ಸಮಯ ಹಾಗೂ ಪಡೆದ ನಂತರದ ಅವಧಿಗಳಲ್ಲಿ ಘಟನಾವಳಿಗಳು ನಿಯಂತ್ರಣ ತಪ್ಪಿಹೋಗುವುದಕ್ಕೆ ಕಾರಣನೆಂಬ ಹೊಣೆಗಾರಿಕೆಯಿಂದ ಮೌಂಟ್‌‌ಬ್ಯಾಟನ್‌‌ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿಯುತ್ತಾರೆ. ೧೯೫೦ರ ದಶಕದ ಅವಧಿಯಲ್ಲಿನ ಭಾರತದ ಸರ್ಕಾರಗಳಿಗೆ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ ಜಾನ್‌ ಕೆನೆತ್‌‌ ಗಲ್‌ಬ್ರೈತ್‌ ಎಂಬ ಓರ್ವ ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನಡಿಯನ್‌ ಅಮೇರಿಕನ್‌ ಅರ್ಥಶಾಸ್ತ್ರಜ್ಞರು ನೆಹರೂರ ಸಮೀಪವರ್ತಿಗಳಾಗಿ ಮಾರ್ಪಟ್ಟರು ಹಾಗೂ ೧೯೬೧–೬೩ರ ಅವಧಿಯಲ್ಲಿ ಅಮೇರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು, ಇವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದರು. ಪಂಜಾಬ್‌ನ ವಿಭಜನೆಯಿಂದುಂಟಾದ ಭೀಕರ ಅನಾಹುತಗಳನ್ನು ಕಾಲಿನ್ಸ್‌ ಮತ್ತು ಲಾ ಪಿಯೆರ್ರೆರ ಫ್ರೀಡಮ್‌ ಅಟ್‌ ಮಿಡ್‌ನೈಟ್‌ ನಲ್ಲಿ ಘನಘೋರವಾಗಿ ವರ್ಣಿಸಲಾಗಿದ್ದು, ಇದಕ್ಕೆ ಮೌಂಟ್‌‌ಬ್ಯಾಟನ್‌‌ನೇ ಪ್ರಧಾನ ಮಾಹಿತಿದಾರನಾಗಿದ್ದನು, ಇದಕ್ಕೆ ಇತ್ತೀಚಿನ ಸೇರ್ಪಡಿಕೆಯೆಂದರೆ ಬಾಪ್ಸಿ ಸಿಧ್ವಾರ ಕಾದಂಬರಿ ಐಸ್‌ ಕ್ಯಾಂಡಿ ಮ್ಯಾನ್‌ (ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ ಇದನ್ನು ಕ್ರ್ಯಾಕಿಂಗ್‌‌ ಇಂಡಿಯಾ ಎಂದು ಪ್ರಕಟಿಸಲಾಗಿದೆ), ಇದನ್ನು ಅರ್ಥ್‌ ಎಂಬ ಚಲನಚಿತ್ರವನ್ನಾಗಿ ರೂಪಿಸಲಾಗಿದೆ. ೧೯೮೬ರಲ್ಲಿ : ಎಂಬ ಶೀರ್ಷಿಕೆಯ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಕೊನೆಯ ವೈಸ್‌‌ರಾಯ್‌‌ ಆಗಿ ಜೀವನಾವಧಿಯ ಬಹು-ಭಾಗಗಳ ನಾಟಕರೂಪವನ್ನು ITVಯು ಪ್ರಸಾರ ಮಾಡಿತು. === ಭಾರತ ಹಾಗೂ ಪಾಕಿಸ್ತಾನಗಳು ರೂಪುಗೊಂಡ ನಂತರದ ವೃತ್ತಿಜೀವನ === ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ ಮೌಂಟ್‌‌ಬ್ಯಾಟನ್‌‌ರು ೧೯೪೮–೧೯೫೦ರ ಅವಧಿಯಲ್ಲಿ ಮೆಡಿಟರೇನಿಯನ್‌ ನೌಕಾಪಡೆಯಲ್ಲಿ ಪಹರೆನೌಕೆಯ ಸ್ಕ್ವಾಡ್ರನ್‌ನ ದಳಪತಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಆತ ನೌಕಾಧಿಪತ್ಯ ಕಚೇರಿಯಲ್ಲಿ ನಾಲ್ಕನೆಯ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೦–೫೨ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ನಂತರ ಮೂರು ವರ್ಷಗಳ ಕಾಲ ಮೆಡಿಟರೇನಿಯನ್‌ ಸಮುದ್ರ ಪ್ರದೇಶ ನೌಕಾಪಡೆಗೆ ಪ್ರಧಾನ ದಂಡನಾಯಕನಾಗಿ ಕಾರ್ಯನಿರ್ವಹಿಸಲು ಮೆಡಿಟರೇನಿಯನ್‌ ಸಮುದ್ರ ಪ್ರದೇಶಕ್ಕೆ ಮರಳಿದರು. ಮೌಂಟ್‌‌ಬ್ಯಾಟನ್‌‌ರು ನೌಕಾಧಿಪತ್ಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ೧೯೫೫–೫೯ರ ಅವಧಿಯಲ್ಲಿ ಅಂತಿಮ ನೇಮಕಾತಿಯನ್ನು ಪಡೆದಿದ್ದರು, ಸುಮಾರು ನಲವತ್ತು ವರ್ಷಗಳ ಹಿಂದೆ ಆತನ ತಂದೆ ಈ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ರಿಟಿಷ್‌ ನೌಕಾಪಡೆಯ ಇತಿಹಾಸದಲ್ಲಿಯೇ ಓರ್ವ ತಂದೆ ಮತ್ತು ಮಗ ಈರ್ವರೂ ಅಷ್ಟೊಂದು ಉತ್ತಮ ದರ್ಜೆಯ ಅಧಿಕಾರವನ್ನು ಪಡೆದಿದ್ದುದು ಅದೇ ಮೊದಲಾಗಿತ್ತು. ತನ್ನ ಕೃತಿ ಮೌಂಟ್‌‌ಬ್ಯಾಟನ್‌‌ನ ಜೀವನಚರಿತ್ರೆಯಲ್ಲಿ, ಫಿಲಿಪ್‌ ಝೀಗ್ಲೆರ್‌‌ ಆತನ ಮಹಾತ್ವಾಕಾಂಕ್ಷೆಯ ಪ್ರವೃತ್ತಿಯ ಬಗ್ಗೆ ಹೀಗೆ ಬರೆಯುತ್ತಾರೆ: "ಆತನ ಸ್ವಪ್ರತಿಷ್ಠೆಯು, ಮಕ್ಕಳ ನಡತೆಯಂತಿದ್ದರೂ ಅಮಾನುಷವಾದುದಾಗಿದ್ದರೆ ಆತನ ಮಹಾತ್ವಾಕಾಂಕ್ಷೆಗೆ ಯಾವುದೇ ಕಡಿವಾಣವಿರಲಿಲ್ಲ. ಸತ್ಯವಾದ ವಿಚಾರವು ಆತನ ಕೈಗಳಲ್ಲಿ ಅದೇನು ಇತ್ತೋ ಅದರಿಂದ ತ್ವರಿತವಾಗಿ ಅದು ಏನಾಗಿರಬೇಕಿತ್ತೋ ಅದಾಗಿ ಬದಲಾಗಿಬಿಡುತ್ತಿತ್ತು. ಆತನು ತನ್ನದೇ ಸಾಧನೆಗಳನ್ನು ಉತ್ಪ್ರೇಕ್ಷಿಸಿಕೊಳ್ಳಲಾಗುವಂತೆ ವಾಸ್ತವ ವಿಚಾರಗಳನ್ನು ತೀರ ಅಲಕ್ಷ್ಯವಾಗಿ ಉಡಾಫೆಯಿಂದ ಬದಲಿಸಿ ಇತಿಹಾಸದ ದಾಖಲೆಗಳನ್ನು ತಿದ್ದಿ ಬರೆಸಲು ಪ್ರಯತ್ನಿಸಿದ್ದ. ಒಂದು ಸಮಯದಲ್ಲಿ ನನ್ನ ಭ್ರಮೆಗೀಡು ಮಾಡುವ ಆತನ ಉದ್ದೇಶವು ನನಗೆಷ್ಟು ಕೆರಳುವ ಭಾವನೆಯನ್ನು ಉಂಟು ಮಾಡಿತೆಂದರೆ ನನ್ನ ಮೇಜಿನ ಮೇಲೆ ಹೀಗೊಂದು ಟಿಪ್ಪಣಿಯನ್ನು ಬರೆದಿಟ್ಟುಕೊಳ್ಳುವುದು ಅನಿವಾರ್ಯವಾಯಿತು: , , ." ಪ್ರಥಮ ದರ್ಜೆಯ ಸೀ ಲಾರ್ಡ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಆತನ ಪ್ರಾಥಮಿಕ ಆದ್ಯತೆಗಳು ಅಕಸ್ಮಾತ್‌ ಬ್ರಿಟನ್‌‌‌ನ ಮೇಲೆ ಅಣುದಾಳಿಯಾದಲ್ಲಿ ಬ್ರಿಟಿಷ್‌ ನೌಕಾಪಡೆಯು ಹಡಗಿನ ಮಾರ್ಗಗಳನ್ನು ಹೇಗೆ ಅಪಾಯಕ್ಕೀಡಾಗದಂತೆ ತೆರೆದಿಟ್ಟುಕೊಳ್ಳಬಲ್ಲದು ಎಂಬುದನ್ನು ಯೋಜನೆಗಳನ್ನು ರೂಪಿಸುವುದಾಗಿತ್ತು. ಇಂದಿನ ದಿನಮಾನದಲ್ಲಿ, ಇದು ಹೆಚ್ಚಿನ ಮಹತ್ವದ್ದಲ್ಲವೆಂದೆನಿಸಬಹುದು ಆದರೆ ಆ ಸಮಯದಲ್ಲಿ ಕೇವಲ ಕೆಲವೇ ಜನರು ಮಾತ್ರವೇ ಅಣ್ವಸ್ತ್ರಗಳು ಹೊಂದಿರುವ ಅಪರಿಮಿತ ಶಕ್ತಿಯ ಸಾಮರ್ಥ್ಯವನ್ನು ಅದರಿಂದಾಗಬಹುದಾದ ವಿನಾಶವನ್ನು ಹಾಗೂ ವಿಕಿರಣ ಧೂಳೀಪಾತದಿಂದಾಗಬಹುದಾದ ಅಪಾಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಸೇನಾಪಡೆಯ ಅಧಿಕಾರಿಗಳು ಪರಮಾಣು ವಿಸ್ಫೋಟದಲ್ಲಿ ಒಳಗೊಳ್ಳುವ ಭೌತಶಾಸ್ತ್ರೀಯ ವಿವರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಬಿಕಿನಿ ಅಟಾಲ್‌‌ ಪರೀಕ್ಷೆಗಳಿಂದ ಮೂಡುವ ವಿದಳನ ಕ್ರಿಯೆಗಳು ಸಾಗರಗಳ ಮೂಲಕ ಹರಡಿ ಭೂಮಿಯನ್ನೇ ಸ್ಫೋಟಿಸುವ ಸಾಧ್ಯತೆ ಇಲ್ಲವೆಂದು ಪದೇ ಪದೇ ಮೌಂಟ್‌‌ಬ್ಯಾಟನ್‌‌ನಿಗೆ ವಿವರಿಸಬೇಕಾಗಿ ಬಂದ ಪರಿಸ್ಥಿತಿಯು ಇದನ್ನು ಸುಸ್ಪಷ್ಟಗೊಳಿಸುತ್ತದೆ. ಈ ನೂತನ ರೀತಿಯ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದ ಹಾಗೆಯೇ ಜಲಾಂತರ್ಗಾಮಿಗಳಿಗೆ ಸಂಬಂಧಪಟ್ಟ ಹಾಗೆ ಅವುಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡರೂ ಹೋರಾಟಗಳಲ್ಲಿ ಅವುಗಳ ಬಳಕೆಯನ್ನು ಮೌಂಟ್‌‌ಬ್ಯಾಟನ್‌‌ ಪ್ರತಿರೋಧಿಸುತ್ತಾ ಬಂದಿದ್ದರು. ಅಣ್ವಸ್ತ್ರಗಳ ಬಳಕೆಯ ಬಗೆಗೆ ತನ್ನ ಭಾವನೆಗಳನ್ನು "ಎ ಮಿಲಿಟರಿ ಕಮಾಂಡರ್‌ ಸರ್ವೇಸ್‌ ದ ನ್ಯೂಕ್ಲಿಯರ್‌ ಆರ್ಮ್ಸ್‌ ರೇಸ್‌ ,"ಎಂಬ ಲೇಖನದಲ್ಲಿ ಮೌಂಟ್‌‌ಬ್ಯಾಟನ್‌‌ ಹೀಗೆ ಮುಕ್ತವಾಗಿ ವ್ಯಕ್ತಪಡಿಸಿದ್ದರು ಇದನ್ನು ೧೯೭೯–೮೦ರ ಚಳಿಗಾಲದ ಅವಧಿಯಲ್ಲಿ ಆತನ ಸಾವಿನ ಕೆಲವೇ ಸಮಯದ ನಂತರ ಇಂಟರ್‌‌ನ್ಯಾಷನಲ್‌ ಸೆಕ್ಯೂರಿಟಿ ಪತ್ರಿಕೆ ಯಲ್ಲಿ ಪ್ರಕಟಿಸಲಾಗಿತ್ತು. ನೌಕಾಧಿಪತ್ಯ ಕಚೇರಿಯನ್ನು ತೊರೆದ ನಂತರ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು ರಕ್ಷಣಾ ದಳ ಸಿಬ್ಬಂದಿ ವರ್ಗದ ಮುಖ್ಯಾಧಿಕಾರಿಯ ಹುದ್ದೆಯನ್ನು ಅಲಂಕರಿಸಿದ್ದರು. ಈ ಹುದ್ದೆಯಲ್ಲಿ ಆರು ವರ್ಷಗಳ ಸೇವೆ ಸಲ್ಲಿಸಿದ ಇವರು ಆ ಅವಧಿಯಲ್ಲಿ ಸೇನಾಪಡೆಯ ಶಾಖೆಯ ಘಟಕದ ಮೂರು ಸೇವಾ ಘಟಕಗಳನ್ನು ಒಂದೇ ರಕ್ಷಣಾ ಇಲಾಖೆಯನ್ನಾಗಿ ಏಕೀಕರಿಸಲು ಯಶಸ್ವಿಯಾಗಿದ್ದರು. ಮೌಂಟ್‌‌ಬ್ಯಾಟನ್‌‌ರು ವ್ಹೈಟ್‌ ದ್ವೀಪದ ಮಂಡಲಾಧಿಪತಿಯಾಗಿ ೧೯೬೯ರಿಂದ ೧೯೭೪ರವರೆಗೆ ಕಾರ್ಯನಿರ್ವಹಿಸಿದರಲ್ಲದೇ ೧೯೭೪ರಲ್ಲಿ ವ್ಹೈಟ್‌ ದ್ವೀಪದ ಪ್ರಥಮ ದರ್ಜೆಯ ಲಾರ್ಡ್‌‌ ಲೆಫ್ಟಿನೆಂಟ್‌‌ ಆಗಿ ನೇಮಕಗೊಂಡಿದ್ದರು. ಆತನು ತನ್ನ ಸಾವಿನವರೆಗೆ ಇದೇ ಪದವಿಯಲ್ಲಿ ಇದ್ದರು. ೧೯೬೭ರಿಂದ ೧೯೭೮ರವರೆಗೆ, ಮೌಂಟ್‌‌ಬ್ಯಾಟನ್‌‌ ಆಗ ಒಂದೇ ಮಂಡಲಿಯಿಂದ ಪ್ರತಿನಿಧಿಸಲ್ಪಡುತ್ತಿದ್ದ ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು : ಅದೆಂದರೆ ಸೌತ್‌ ವೇಲ್ಸ್‌‌ನ ಅಟ್ಲಾಂಟಿಕ್‌ ಕಾಲೇಜ್‌ ಮಂಡಲಿಯಾಗಿತ್ತು. ಯುನೈಟೆಡ್‌ ವರ್ಲ್ಡ್‌ ಕಾಲೇಜಸ್‌ ಮಂಡಲಿಯನ್ನು ಬೆಂಬಲಿಸಿದ ಮೌಂಟ್‌‌ಬ್ಯಾಟನ್‌‌ರು ರಾಜ್ಯಾಧಿಪತಿಗಳು, ರಾಜಕಾರಣಿಗಳು ಹಾಗೂ ವಿಶ್ವದಾದ್ಯಂತದ ಪ್ರಮುಖ ನಾಯಕರುಗಳೊಂದಿಗೆ ತಮ್ಮ ಆಸಕ್ತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದರು. ಮೌಂಟ್‌‌ಬ್ಯಾಟನ್‌‌ರ ಅಧಿಕಾರಾವಧಿಯಲ್ಲಿ ಹಾಗೂ ವೈಯಕ್ತಿಕ ಒಳಗೊಳ್ಳುವಿಕೆಗಳ ಮೂಲಕ ಆಗ್ನೇಯ ಏಷ್ಯಾದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ಅನ್ನು ಸಿಂಗಪೂರ್‌‌ನಲ್ಲಿ ೧೯೭೧ರಲ್ಲಿ ಸ್ಥಾಪಿಸಲಾಗಿತ್ತು ಅದಾದ ನಂತರ ಪೆಸಿಫಿಕ್‌ ಪ್ರದೇಶದ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ (ಪ್ರಸ್ತುತ ಲೆಸ್ಟರ್‌ ಪಿಯರ್ಸನ್‌ ಯುನೈಟೆಡ್‌ ವರ್ಲ್ಡ್‌ ಕಾಲೇಜ್‌ ಆಫ್‌ ದಿ ಪೆಸಿಫಿಕ್‌ ಎಂದು ಕರೆಸಿಕೊಳ್ಳುತ್ತಿದೆ)ಅನ್ನು ಕೆನಡಾದ ವಿಕ್ಟೋರಿಯಾ ಎಂಬಲ್ಲಿ ೧೯೭೪ರಲ್ಲಿ ಸ್ಥಾಪಿಸಲಾಯಿತು. ೧೯೭೮ರಲ್ಲಿ ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ ತನ್ನ ಅಧ್ಯಕ್ಷತೆಯನ್ನು ಸೋದರ ಸಂಬಂಧಿ ಮೊಮ್ಮಗ ವೇಲ್ಸ್‌‌ನ ರಾಜಕುಮಾರನಿಗೆ ವಹಿಸಿಕೊಟ್ಟರು. === ಹೆರಾಲ್ಡ್‌ ವಿಲ್ಸನ್‌‌ರ ವಿರುದ್ಧ ಆರೋಪಿತ ಒಳಸಂಚುಗಳು === ಪೀಟರ್‌ ರೈಟ್‌ ಎಂಬಾತ ತನ್ನ ಕೃತಿ ಸ್ಪೈಕ್ಯಾಚರ್‌ನಲ್ಲಿ ೧೯೬೭ರಲ್ಲಿ ಮೌಂಟ್‌‌ಬ್ಯಾಟನ್‌‌ ಪತ್ರಿಕಾಲಯ ಬ್ಯಾರನ್‌ ಮತ್ತು MI೫ ಬೇಹುಗಾರ ಸೆಸಿಲ್‌ ಕಿಂಗ್‌‌ ಮತ್ತು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಸೋಲ್ಲಿ ಝೂಕರ್‌ಮನ್‌‌ರವರುಗಳೊಂದಿಗೆ ಖಾಸಗಿ ಸಭೆಗೆ ಹಾಜರಾಗಿದ್ದರು. ಮಹಾರಾಜ ಮತ್ತು ಪೀಟರ್‌ ರೈಟ್‌ಗಳು ಬಿಕ್ಕಟ್ಟಿಗೆ ಸಿಲುಕಿದ್ದ ಹೆರಾಲ್ಡ್‌ ವಿಲ್ಸನ್‌‌ರ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಳ್ಳಬೇಕೆಂದಿದ್ದ ಮೂವತ್ತು ಮಂದಿ MI೫ ಅಧಿಕಾರಿಗಳ ಗುಂಪಿನ ಸದಸ್ಯರಾಗಿದ್ದರು, ಹಾಗೂ ಹೇಳಿಕೆಗಳ ಪ್ರಕಾರ ಮಹಾರಾಜರು ಈ ಸಭೆಯನ್ನು ರಾಷ್ಟ್ರೀಯ ಸಂರಕ್ಷಕ ಸರ್ಕಾರದ ನಾಯಕರಾಗಲು ಮೌಂಟ್‌‌ಬ್ಯಾಟನ್‌‌ರ ಮನವೊಲಿಸಲು ಬಳಸಿಕೊಂಡಿದ್ದರು. ಸೋಲ್ಲಿ ಝೂಕರ್‌ಮನ್‌‌ರು ಇದನ್ನು ದೇಶದ್ರೋಹವೆಂದು ಎತ್ತಿ ತೋರಿದರೂ ಮೌಂಟ್‌‌ಬ್ಯಾಟನ್‌‌ರ ಕಾರ್ಯಪ್ರವೃತ್ತಗೊಳ್ಳುವ ಬಗ್ಗೆ ತೋರಿದ ಉಪೇಕ್ಷೆಯಿಂದಾಗಿ ಇದರ ಪ್ರಯೋಜನವೇನೂ ಆಗಲಿಲ್ಲ. ೨೦೦೬ರ ದ ಪ್ಲಾಟ್‌ ಎಗೇನ್ಸ್‌ಟ್‌ ಹೆರಾಲ್ಡ್‌ ವಿಲ್ಸನ್‌‌ ಎಂಬ BBCಯ ಸಾಕ್ಷ್ಯಚಿತ್ರವು ಕಛೇರಿಯಲ್ಲಿನ ತನ್ನ ಎರಡನೆಯ ಕಾರ್ಯಾವಧಿಯಲ್ಲಿದ್ದ (೧೯೭೪–೭೬) ವಿಲ್ಸನ್‌ರನ್ನು ಪದಚ್ಯುತಗೊಳಿಸುವ ಮೌಂಟ್‌‌ಬ್ಯಾಟನ್‌‌ರನ್ನು ಒಳಗೊಂಡಿರುವ ಮತ್ತೊಂದು ಒಳಸಂಚನ್ನು ಮಾಡಲಾಗಿತ್ತು ಎಂದು ಆರೋಪಿಸಿತ್ತು. ಈ ಅವಧಿಯಲ್ಲಿ ಭಾರೀ ಹಣದುಬ್ಬರ, ನಿರುದ್ಯೋಗದ ತೀವ್ರ ಏರಿಕೆ ಹಾಗೂ ವ್ಯಾಪಕ ಕೈಗಾರಿಕಾ ವಿಪ್ಲವಗಳು ತಾಂಡವವಾಡುತ್ತಿದ್ದವು. ಹೀಗೆ ಮಾಡಲಾಗಿದ್ದ ಒಳಸಂಚು ಸೋವಿಯೆತ್‌ ಒಕ್ಕೂಟಹಾಗೂ ಕಾರ್ಮಿಕರ ಒಕ್ಕೂಟಗಳಿಂದ ತಮಗೆ ಇದೆ ಎಂದು ಭಾವಿಸಲಾಗಿದ್ದ ಅಪಾಯವನ್ನು ಎದುರಿಸಲು ಖಾಸಗಿ ಸೈನ್ಯಗಳನ್ನು ಕಟ್ಟಿಕೊಳ್ಳುತ್ತಿದ್ದ ಬಲಪಂಥೀಯ ಸೇನಾಪಡೆಯ ಮಾಜಿ ಅಧಿಕಾರಿಗಳ ಮೇಲೆ ಆಧರಿಸಿತ್ತು. ಅಂಗೀಕೃತವಾದ ಕಾರ್ಮಿಕ ಸಂಘಟನೆಗಳಿಂದ ಭಾಗಶಃ ಧನಸಹಾಯವನ್ನು ಪಡೆಯುತ್ತಿದ್ದ ಲೇಬರ್‌ ಪಕ್ಷವು ಈ ಬೆಳವಣಿಗೆಗಳನ್ನು ತಡೆಯಲು ಅಸಮರ್ಥವಾಗಿದೆ ಹಾಗೂ ಆಸಕ್ತಿರಹಿತವಾಗಿದೆ ಎಂದೂ ಹಾಗೂ ವಿಲ್ಸನ್‌ರು ಸೋವಿಯೆತ್‌ ಒಕ್ಕೂಟದ ಓರ್ವ ಗುಪ್ತಚರ ಅಥವಾ ಕನಿಷ್ಟಪಕ್ಷ ಕಮ್ಯುನಿಷ್ಟರ ಪರ ಸಹಾನುಭೂತಿ ಉಳ್ಳವರು ಎಂದು ಅವರುಗಳು ಭಾವಿಸಿದ್ದರು, ಈ ಎಲ್ಲಾ ಹೇಳಿಕೆಗಳನ್ನು ವಿಲ್ಸನ್‌ ಬಲವಾಗಿ ತಳ್ಳಿಹಾಕಿದ್ದರು. ಖಾಸಗಿ ಸೇನೆಗಳು ಹಾಗೂ MI೫ ಮತ್ತು ಸೇನಾಪಡೆಯಲ್ಲಿನ ತಮ್ಮ ಸಹಾನುಭೂತಿಯನ್ನು ಹೊಂದಿರುವವರನ್ನು ಬಳಸಿಕೊಂಡು ವಿಲ್ಸನ್‌ರನ್ನು ಸ್ಥಾನಭ್ರಷ್ಟಗೊಳಿಸಿ ಅವರ ಸ್ಥಾನದಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ನೇಮಿಸಲು ಕ್ಷಿಪ್ರ ಕಾರ್ಯಾಚರಣೆಯ ಒಳಸಂಚೊಂದನ್ನು ಮಾಡಲಾಗಿತ್ತು ಎಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು. ಮೌಂಟ್‌‌ಬ್ಯಾಟನ್‌‌ ಹಾಗೂ ಬ್ರಿಟಿಷ್‌‌ ರಾಜಕುಟುಂಬದ ಇತರ ಸದಸ್ಯರು ಈ ಒಳಸಂಚಿಗೆ ಬೆಂಬಲ ನೀಡಿ ಅದರ ಯೋಜನೆಯಲ್ಲಿ ಭಾಗಿಯಾಗಿದ್ದರೆಂದು ಈ ಸಾಕ್ಷ್ಯಚಿತ್ರವು ಆರೋಪಿಸಿತ್ತು. ವಿಲ್ಸನ್‌ಗೆ ಸಾಕಷ್ಟು ಹಿಂದಿನಿಂದಲೇ ತನ್ನನ್ನು ಸ್ಥಾನಭ್ರಷ್ಟಗೊಳಿಸಲು MI೫ ಪ್ರಾಯೋಜಿತ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂಬ ಭಾವನೆಯಿತ್ತು. ಈ ಅನುಮಾನವು ೧೯೭೪ರಲ್ಲಿ ಸೇನಾಪಡೆಯು ಅಲ್ಲಿ ಸಂಭಾವ್ಯ ದಾಳಿಯಿಂದ ರಕ್ಷಣೆಯನ್ನು ನೀಡುವ ತರಬೇತಿಯನ್ನು ಕೈಗೊಳ್ಳುವ ಕಾರಣವನ್ನು ನೀಡಿ ಹೀಥ್ರೂ ವಿಮಾನನಿಲ್ದಾಣವನ್ನು ವಶಪಡಿಸಿಕೊಂಡಾಗ ಮತ್ತಷ್ಟು ತೀವ್ರಗೊಂಡಿತು. ಮಾರ್ಷಿಯಾ ಫಾಲ್ಕೆಂಡರ್‌ ಎಂಬ ಓರ್ವ ಹಿರಿಯ ಸಹಾಯಕ ಹಾಗೂ ವಿಲ್ಸನ್‌ರ ಸಮೀಪವರ್ತಿ ಮಿತ್ರರು ಈ ಕಾರ್ಯಾಚರಣೆಯ ಬಗೆಗೆ ಪ್ರಧಾನ ಮಂತ್ರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ ಹಾಗೂ ಇದನ್ನು ಸೇನಾಪಡೆಯು ಅಧಿಕಾರ ವಶಪಡಿಕೆಯ ಪ್ರಾಯೋಗಿಕ ಕಾರ್ಯಾಚರಣೆಯಾಗಿ ಇದನ್ನು ಮಾಡಲು ಆದೇಶಿಸಲಾಗಿತ್ತು ಎಂಬುದನ್ನು ಒತ್ತಿ ಹೇಳಿದ್ದರು. ವಿಲ್ಸನ್‌ರಿಗೆ ಕೂಡಾ ಬಲಪಂಥೀಯ MI೫ ಅಧಿಕಾರಿಗಳ ಸಣ್ಣ ತಂಡವೊಂದು ತಮ್ಮ ವಿರುದ್ಧ ಚಾರಿತ್ರ್ಯ ವಧೆಯ ಆಂದೋಲನವನ್ನು ಕೈಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮನವರಿಕೆಯಾಗಿತ್ತು. ಕನಿಷ್ಟ ೧೯೮೮ರವರೆಗೆ ಈ ಮುಂಚೆ ಇಂತಹಾ ಆರೋಪಗಳನ್ನು ವಿಲ್ಸನ್‌ರ ಸಂಶಯಪಿಶಾಚಿತನವೆಂದು ತಳ್ಳಿಹಾಕಲಾಗುತ್ತಿತ್ತು, ಆ ಸಮಯದಲ್ಲಿ ಪೀಟರ್‌ ರೈಟ್‌ ತನ್ನ ಕೃತಿಯಲ್ಲಿ ಮಾಡಲಾಗಿರುವ ಆರೋಪಗಳು "ನಂಬಲನರ್ಹವಾದವು " ಹಾಗೂ ತೀರಾ ಉತ್ಪ್ರೇಕ್ಷೆಯಿಂದ ಕೂಡಿದುದು ಎಂದು ಒಪ್ಪಿಕೊಂಡಿದ್ದರು. ಆದಾಗ್ಯೂ BBCಯ ಈ ಸಾಕ್ಷ್ಯಚಿತ್ರದಲ್ಲಿ ಹಲವು ಹೊಸ ಸಾಕ್ಷಿಗಳನ್ನು ಸಂದರ್ಶಿಸಿದಾಗ ಅವರುಗಳು ಈ ಆರೋಪಗಳಿಗೆ ಹೊಸದಾದ ಸಮರ್ಥನೆಗಳನ್ನು ನೀಡಿದ್ದರು. ನಿರ್ಣಾಯಕವಾಗಿ ೨೦೦೯ರಲ್ಲಿ ಪ್ರಕಟವಾದ ದ ಡಿಫೆನ್ಸ್‌ ಆಫ್‌ ದ ರಿಯಾಲ್ಮ್‌ ಎಂಬ MI೫ಯ ಪ್ರಥಮ ದರ್ಜೆಯ ಅಧಿಕಾರಿಗಳ ಇತಿಹಾಸವನ್ನು ಕುರಿತಾದ ಕೃತಿಯು ಗೌಪ್ಯವಾಗಿ ವಿಲ್ಸನ್‌ರ ವಿರುದ್ಧವಾಗಿ ಒಂದು ಒಳಸಂಚನ್ನು ಹೂಡಲಾಗಿತ್ತು ಹಾಗೂ MI೫ ಆತನ ಬಗ್ಗೆ ಒಂದು ಕಡತವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿತ್ತು. ಅಷ್ಟು ಮಾತ್ರವಲ್ಲದೇ ಅದು ಈ ಒಳಸಂಚು ಯಾವುದೇ ರೀತಿಯಲ್ಲಿ ಅಧಿಕೃತ ಕಾರ್ಯಾಚರಣೆಯಾಗಿರಲಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯು ಕೆಲವು ಅತೃಪ್ತ ಅಧಿಕಾರಿಗಳ ಸಣ್ಣ ತಂಡವೊಂದಕ್ಕೆ ಮಾತ್ರವೇ ಅನ್ವಯಿಸುತ್ತಿತ್ತು ಎಂದೂ ಸ್ಪಷ್ಟಪಡಿಸಿದೆ. ಇಷ್ಟು ಮಾತ್ರ ವಿಚಾರವನ್ನು ಮಾಜಿ ಸಂಪುಟ ಕಾರ್ಯದರ್ಶಿಗಳಾಗಿದ್ದ ಲಾರ್ಡ್‌‌ ಹಂಟ್‌ರು ಈ ಮೊದಲೇ ಖಚಿತಪಡಿಸಿದ್ದರು ೧೯೯೬ರಲ್ಲಿ ನಡೆಸಲಾದ ಒಂದು ಗುಪ್ತ ತನಿಖೆಯಲ್ಲಿ ಅವರು ಹೀಗೆಂದು ತಮ್ಮ ಅಭಿಪ್ರಾಯ ದಾಖಲಿಸಿದ್ದರು "MI೫ನಲ್ಲಿ ಕೆಲವರು ತೀರ ಅಲ್ಪ ಸಂಖ್ಯೆಯಲ್ಲಿ ಅಸಂತುಷ್ಟರಿದ್ದಾರೆಂಬುದು ನಿಸ್ಸಂಶಯವಾಗಿ ಸತ್ಯ . . . ಪೀಟರ್‌ ರೈಟ್‌ರಂತಹಾ ಅವರುಗಳಲ್ಲಿ ಕೆಲವರು ಬಹುತೇಕ ಬಲಪಂಥೀಯರಾಗಿದ್ದು ಹಗೆತನವನ್ನು ಹಾಗೂ ತೀವ್ರ ಪ್ರಮಾಣದ ವೈಯಕ್ತಿಕ ದ್ವೇಷಗಳನ್ನು ಇಟ್ಟುಕೊಂಡವರಿದ್ದಾರೆ – ಇವರುಗಳು ಈ ದ್ವೇಷಕ್ಕೆ ಬಲಿಯಾಗಿ ಲೇಬರ್‌ ಪಕ್ಷದ ಸರ್ಕಾರದ ವಿರುದ್ಧವಾಗಿ ಮಾನಹಾನಿಕರ ದ್ವೇಷಮಯ ಕಥೆಗಳನ್ನು ಹರಡುತ್ತಿದ್ದಾರೆ." ಈ ಒಂದು ಸಂಚಿನಲ್ಲಿ ಮೌಂಟ್‌‌ಬ್ಯಾಟನ್‌ರ ಪಾತ್ರವು ಅಸ್ಪಷ್ಟವಾಗಿಯೇ ಉಳಿದಿದೆ. ಕನಿಷ್ಟ ಮಟ್ಟಿಗೆ ಖಚಿತವಾಗಿರುವ ಪ್ರಕಾರ ೧೯೭೦ರ ದಶಕದಲ್ಲಿ ರಾಷ್ಟ್ರದ ಬಗ್ಗೆ ತೀವ್ರ ಕಳಕಳಿಯನ್ನು ಹೊಂದಿದ್ದ ಹಾಗೂ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೊಳ್ಳಲು ತಯಾರಾಗಿದ್ದ ಹಲವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಅವರ ಭಾವನೆಗಳೊಂದಿಗೆ ಈತನೂ ಸಹಮತವನ್ನು ಹೊಂದಿದ್ದರು ಎಂಬುದೂ ಖಚಿತವಾಗಿದೆ. ಆದಾಗ್ಯೂ ಸಾಕ್ಷ್ಯಚಿತ್ರವು ಕ್ಷಿಪ್ರ ಕಾರ್ಯಾಚರಣೆಯ ಯೋಜಕರಿಗೆ ತನ್ನ ಸಹಾಯವನ್ನು ನೀಡುವ ಅಪೇಕ್ಷೆಯನ್ನು ಆರೋಪಿಸಿರುವುದಾದರೂ, ಅವರು ವಾಸ್ತವವಾಗಿಯೂ ಅಂತಹುದೊಂದು ಕಾರ್ಯರೂಪಕ್ಕೆ ಬಂದಿರಬಹುದಾಗಿದ್ದ ಕ್ಷಿಪ್ರ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ವಹಿಸಿದ್ದರು ಎಂಬುದನ್ನು ಖಚಿತಪಡಿಸಲಾಗಿಲ್ಲ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಹಾಗೆ ಚರ್ಚಿಸಲಾದ ಯಾವುದೇ ಒಳಸಂಚುಗಳು ವಾಸ್ತವವಾಗಿ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ ಹಾಗೂ ಬಹುಶಃ ಇದಕ್ಕೆ ಕಾರಣ ಇದರಲ್ಲಿ ಒಳಗೊಂಡಿದ್ದ ಜನರ ಸಂಖ್ಯೆಯು ತೀರ ಕಡಿಮೆ ಇದ್ದು ಅದು ಯಶಸ್ವಿಯಾಗುವ ಸಾಧ್ಯತೆ ತೀರ ಕಡಿಮೆಯಾಗಿತ್ತು. == ವೈಯಕ್ತಿಕ ಜೀವನ == === ವಿವಾಹ === ಕುಟುಂಬದವರು ಹಾಗೂ ಸ್ನೇಹಿತರ ಮಧ್ಯೆ ಮೌಂಟ್‌‌ಬ್ಯಾಟನ್‌‌ರ ಅಡ್ಡ ಹೆಸರು "ಡಿಕೀ," ಎಂಬುದಾಗಿತ್ತು, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ "ರಿಚರ್ಡ್‌ " ಎಂಬುದು ಆತನ ಹೆಸರಿಸಲಾದ ಹೆಸರುಗಳಲ್ಲಿ ಸೇರಿರಲಿಲ್ಲ. ಇದು ಹೀಗೇಕಾಯಿತೆಂದರೆ ಆತನ ಮುತ್ತಜ್ಜಿ ರಾಣಿ ವಿಕ್ಟೋರಿಯಾರು "ನಿಕೀ " ಎಂಬ ಅಡ್ಡಹೆಸರನ್ನು ಸೂಚಿಸಿದ್ದರು, ಆದಾಗ್ಯೂ ರಷ್ಯನ್‌‌ ರಾಜಕುಟುಂಬದಲ್ಲಿದ್ದ ಹಲವು (ಕಡೆಯ ತ್ಸಾರ್‌ ಆಗಿದ್ದ ನಿಕೋಲಸ್‌‌‌‌ IIರನ್ನು ಹೆಸರಿಸಲು "ನಿಕೀ" ಹೆಸರನ್ನು ಬಳಸಲಾಗುತ್ತಿತ್ತು) ನಿಕೀಗಳೊಂದಿಗೆ ಸೇರಿ ಹೋಗಿತ್ತು ಆದ್ದರಿಂದ ಅವರು ಅದನ್ನು ಡಿಕೀಗೆ ಬದಲಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ವಿವಾಹವು ೧೮ ಜುಲೈ ೧೯೨೨ರಂದು ಸ್ವತಃ ಷಾಫ್ಟೆಸ್‌ಬರ್ರಿಯ ೭ನೆಯ ಅರ್ಲ್‌ನ ಮೊಮ್ಮಗನಾಗಿದ್ದ ನಂತರ ಮೌಂಟ್‌ ಟೆಂಪಲ್‌‌ ನ ೧ನೆಯ ಬ್ಯಾರನ್‌ ಆದ ವಿಲ್‌ಫ್ರೆಡ್‌ ವಿಲಿಯಂ ಆಷ್ಲೆಯ ಪುತ್ರಿ ಎಡ್ವಿನಾ ಸಿಂಥಿಯಾ ಆನ್ನೆಟ್‌ ಆಷ್ಲೆಳೊಂದಿಗೆ ನೆರವೇರಿತು. ಆಕೆಯು ಎಡ್ವರ್ಡಿಯನ್‌ ಪ್ರಭಾವಿ ಉದ್ಯಮಿ ಸರ್‌ ಅರ್ನೆಸ್ಟ್‌ ಕ್ಯಾಸ್ಸೆಲ್‌ನ ಪ್ರೀತಿಪಾತ್ರಳಾದ ಮೊಮ್ಮಗಳಾಗಿದ್ದು ಆತನ ಅಪಾರ ಆಸ್ತಿಗೆ ಆಕೆಯೇ ಪ್ರಧಾನ ಹಕ್ಕುದಾರಳಾಗಿದ್ದಳು. ವಿವಾಹದ ನಂತರ ಐರೋಪ್ಯ ಪ್ರೇಮಿಗಳ ಸ್ಥಾನಗಳು ಹಾಗೂ ಅಮೇರಿಕಾಗಳಿಗೆ ಒಂದು ಚಿತ್ತಾಕರ್ಷಕ ಮಧುಚಂದ್ರದ ಪ್ರವಾಸವು ಏರ್ಪಾಡಾಗಿತ್ತು ಅದರಲ್ಲಿ ಡಗ್ಲಾಸ್‌ ಫೇರ್‌ಬ್ಯಾಂಕ್ಸ್‌, ಮೇರಿ ಪಿಕ್‌ಫರ್ಡ್‌, ಮತ್ತು ಹಾಲಿವುಡ್‌ನಲ್ಲಿ ಚಾರ್ಲಿ ಚಾಪ್ಲಿನ್‌ರವರುಗಳೊಂದಿಗೆ ಭೇಟಿಯು ಸೇರಿತ್ತು ಚಾಪ್ಲಿನ್‌ ಒಂದು ವ್ಯಾಪಕವಾಗಿ ಜನಪ್ರಿಯತೆಯನ್ನು ಹೊಂದಿದ ಮನೆಯಲ್ಲಿ ಕುಳಿತು ನೋಡುವ ಚಲನಚಿತ್ರ "ನೈಸ್‌ ಅಂಡ್‌ ಈಸಿ "ಯನ್ನು ಫೇರ್‌ಬ್ಯಾಂಕ್ಸ್‌, ಪಿಕ್‌ಫರ್ಡ್‌, ಚಾಪ್ಲಿನ್ ಹಾಗೂ ಮೌಂಟ್‌‌ಬ್ಯಾಟನ್‌‌ ದಂಪತಿಗಳ ಪಾತ್ರವರ್ಗವನ್ನು ಹೊಂದಿದ್ದ ಚಿತ್ರವಾಗಿ ಸಿದ್ಧಪಡಿಸಿದ್ದರು. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು : ಅವರುಗಳೆಂದರೆ ಬರ್ಮಾದ ೨ನೆಯ ಕೌಂಟೆಸ್‌ ಮೌಂಟ್‌‌ಬ್ಯಾಟನ್‌‌ ಆಗಿದ್ದ ಪೆಟ್ರೀಷಿಯಾ ಮೌಂಟ್‌‌ಬ್ಯಾಟನ್‌‌ (೧೪ ಫೆಬ್ರವರಿ ೧೯೨೪ರಂದು ಜನನ), ಹಾಗೂ ಲೇಡಿ ಪಮೇಲಾ ಕಾರ್ಮೆನ್‌ ಲೂಯಿಸ್ಸೆ/ಸೆ (ಹಿಕ್ಸ್‌) (೧೯ ಏಪ್ರಿಲ್‌ ೧೯೨೯ರಂದು ಜನನ). ಈ ದಂಪತಿಗಳ ನಡುವಿನ ಸಂಬಂಧವು ಮೊದಲಿನಿಂದಲೇ ಕೆಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಅನುರೂಪರಲ್ಲವೆಂದೆನಿಸತೊಡಗಿತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಸುವ್ಯವಸ್ಥಿತವಾಗಿಟ್ಟುಕೊಳ್ಳುವ ಮನೋಭಾವದಿಂದಾಗಿ ಆತನು ಎಡ್ವಿನಾಳನ್ನು ತೀರ ವೈಯಕ್ತಿಕವಾಗಿ ಗಮನಿಸತೊಡಗಿದನು ಹಾಗೂ ಆಕೆ ಯಾವಾಗಲೂ ತನ್ನ ಕಡೆಗೆಯೇ ಗಮನಹರಿಸಬೇಕೆಂದು ಬಯಸುತ್ತಿದ್ದನು. ಯಾವುದೇ ರೀತಿಯ ಹವ್ಯಾಸಗಳನ್ನು ಅಥವಾ ತೀವ್ರಾಸಕ್ತಿಗಳನ್ನು ಬೆಳೆಸಿಕೊಳ್ಳದ ಹಾಗೂ ರಾಜಕುಲದ ಜೀವನಶೈಲಿಯಲ್ಲಿ ಜೀವಿಸುತ್ತಿದ್ದ, ಎಡ್ವಿನಾ ತನ್ನ ಬಹುತೇಕ ಸಮಯವನ್ನು ಬ್ರಿಟಿಷ್‌‌ ಹಾಗೂ ಭಾರತೀಯ ಉಚ್ಚ ಕುಲೀನರ ಜೊತೆ ಔತಣಕೂಟಗಳ ಭಾಗವಹಿಸುವುದು, ವಿಹಾರಗಳಿಗೆ ತೆರಳುವುದು ಹಾಗೂ ವಾರಾಂತ್ಯಗಳಲ್ಲಿ ದಂಪತಿಗೆ ಮೀಸಲಾಗಿದ್ದ ಹಳ್ಳಿಯ ಮನೆಯೊಂದರಲ್ಲಿ ಏಕಾಂತದಲ್ಲಿರುತ್ತಾ ಕಾಲಕಳೆಯುತ್ತಿದ್ದಳು. ಇಬ್ಬರಲ್ಲೂ ವೈಮನಸ್ಕತೆ ಹೆಚ್ಚುತ್ತಿದ್ದಾಗ್ಯೂ ಸೇನಾಪಡೆಯಲ್ಲಿನ ಅಧಿಕಾರ ಶ್ರೇಣಿಯಲ್ಲಿ ಮೇಲೇರಬಹುದಾದ ಅವಕಾಶ ತಪ್ಪಿಹೋಗಬಹುದೆಂಬ ಭಯದಿಂದ ಲೂಯಿಸ್‌ ವಿವಾಹ ವಿಚ್ಛೇದನವನ್ನು ಹೊಂದಲು ನಿರಾಕರಿಸುತ್ತಿದ್ದ. ಇಬ್ಬರ ಮೇಲೂ ದಾಂಪತ್ಯದ್ರೋಹಗಳ ಆಪಾದನೆಗಳಿದ್ದವು. ಎಡ್ವಿನಾಳು ಹೊಂದಿದ್ದ ಹಲವು ಪ್ರಣಯಪ್ರಸಂಗಗಳಿಂದಾಗಿ ಯೋಲಾ ಲೆಟೆಲ್ಲಿಯರ್‌‌ ಎಂಬ ಫ್ರೆಂಚ್‌ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದುವಂತೆ ಲೂಯಿಸ್‌ನನ್ನು ಪ್ರೇರೇಪಿಸಿತು. ಇದಾದ ನಂತರದಿಂದ ಅವರ ವೈವಾಹಿಕ ಜೀವನವು ಸತತವಾಗಿ ಪರಸ್ಪರ ದೋಷಾರೋಪಣೆಗಳು ಹಾಗೂ ಅನುಮಾನಗಳಿಂದ ಕೂಡಿದ್ದು ಸಂಬಂಧವು ಸಡಿಲವಾಗಲಾರಂಭಿಸಿತು. ೧೯೩೦ರ ದಶಕದುದ್ದಕ್ಕೂ ಇಬ್ಬರೂ ಬಹಿರಂಗವಾಗಿಯೇ ಹಲವು ಪ್ರಣಯ ಪ್ರಸಂಗಗಳಲ್ಲಿ ತೊಡಗಿಕೊಂಡಿದ್ದರು. ವಿಶ್ವ ಸಮರ IIರ ಘೋಷಣೆಯು ಎಡ್ವಿನಾಳಿಗೆ ಲೂಯಿಸ್‌ನ ದಾಂಪತ್ಯದ್ರೋಹದ ಹೊರತಾಗಿ ಬೇರೆ ವಿಚಾರದ ಬಗ್ಗೆ ಗಮನ ಹರಿಸಲು ಅವಕಾಶವನ್ನು ಮಾಡಿಕೊಟ್ಟಿತು. ಆಕೆಯು . ಜಾನ್‌ರ ಆಂಬ್ಯುಲೆನ್ಸ್‌ ಬ್ರಿಗೇಡ್‌ ಎಂಬ ತುರ್ತುಚಿಕಿತ್ಸಾ ವಾಹನ ಸೇವೆಯ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕಿಯಾಗಿ ಸೇರಿಕೊಂಡಳು. ಈ ಒಂದು ಹೊಣೆಗಾರಿಕೆಯು ಪಂಜಾಬ್‌ನ ಜನರು ಅನುಭವಿಸುತ್ತಿದ್ದ ನೋವು ಹಾಗೂ ವೇದನೆಗಳನ್ನು ಕಡಿಮೆಗೊಳಿಸಲು ಆಕೆ ಮಾಡಿದ ಪ್ರಯತ್ನಗಳಿಂದಾಗಿ ವಿಭಜನೆಯ ಅವಧಿಯ ನಾಯಕಿಯಾಗುವ ಹಿರಿಮೆಯನ್ನು ಎಡ್ವಿನಾಳಿಗೆ ತಂದುಕೊಟ್ಟಿತು. ಎಡ್ವಿನಾ ಹಾಗೂ ಭಾರತದ ಪ್ರಥಮ ಜವಾಹರ್‌ ಲಾಲ್‌ ನೆಹರೂರವರಿಬ್ಬರೂ ಭಾರತವು ಸ್ವಾತಂತ್ರ್ಯವನ್ನು ಪಡೆದ ನಂತರ ಸಮೀಪವರ್ತಿ ಸ್ನೇಹಿತರಾಗಿದ್ದರು ಎಂಬುದು ಸಾಕಷ್ಟು ಸ್ಪಷ್ಟವಾಗಿಯೇ ದಾಖಲಾಗಿದೆ. ಬೇಸಿಗೆಯ ಅವಧಿಯಲ್ಲಿ ಆಕೆಯು PMರ ನಿವಾಸಕ್ಕೆ ಆಗ್ಗಾಗ್ಗೆ ಭೇಟಿ ನೀಡುತ್ತಾ ದೆಹಲಿಯಲ್ಲಿನ ಬೇಗೆಯ ದಿನಗಳಲ್ಲಿ ನಿವಾಸದ ಜಗಲಿಯಲ್ಲಿ ಆರಾಮವಾಗಿ ಅಲೆದಾಡುತ್ತಿರುತ್ತಿದ್ದಳು. ಇಬ್ಬರ ನಡುವಿನ ಪತ್ರ ವ್ಯವಹಾರಗಳು ಸಮಾಧಾನಕರ ಆದರೂ ಹತಾಶೆಯಿಂದ ಕೂಡಿದ ಸಂಬಂಧವನ್ನು ಶ್ರುತಪಡಿಸುತ್ತದೆ. ತಾನು ಬರೆದ ಪತ್ರಗಳಲ್ಲೊಂದರಲ್ಲಿ ಎಡ್ವಿನಾಳು ಹೀಗೆ ಹೇಳಿರುತ್ತಾಳೆ "ನಾವು ಮಾಡಿದ ಇಲ್ಲವೇ ಭಾವಿಸಿದ ಯಾವುದೇ ಒಂದು ನೀವು ಹಾಗೂ ನಿಮ್ಮ ಕೆಲಸ ಅಥವಾ ನಾನು ಮತ್ತು ನನ್ನ ಕೆಲಸಗಳಿಗೆ ಸಂಬಂಧಪಟ್ಟ ಹಾಗೆ ನಮ್ಮಿಬ್ಬರ ನಡುವೆ ಬರುವುದಕ್ಕೆ ಅವಕಾಶವಿಲ್ಲ -- ಏಕೆಂದರೆ ಹಾಗೆ ಮಾಡಿದರೆ ಅದು ಎಲ್ಲವನ್ನೂ ಹಾಳುಮಾಡಬಲ್ಲದು." ಇಷ್ಟೆಲ್ಲಾ ಆದರೂ, ಅವರಿಬ್ಬರ ನಡುವಿನ ಸಂಬಂಧವು ದೈಹಿಕ ಸಂಪರ್ಕದವರೆಗೂ ಮುಂದುವರೆದಿತ್ತೇ ಅಥವಾ ಇಲ್ಲವೇ ಎಂಬುದು ಚರ್ಚಾರ್ಹ ವಿಚಾರವಾಗಿಯೇ ಉಳಿದಿದೆ. ಮೌಂಟ್‌‌ಬ್ಯಾಟನ್‌‌ರ ಪುತ್ರಿಯರಿಬ್ಬರೂ ಮುಚ್ಚುಮರೆಯಿಲ್ಲದೇ ತಮ್ಮ ತಾಯಿಯು ಆವೇಶಪೂರಿತ ಸ್ವಭಾವವನ್ನು ಹೊಂದಿದ್ದಳೆಂದು ಹಾಗೂ ತನ್ನ ಪತಿಯ ಉನ್ನತ ಸ್ಥಾನದ ಬಗೆಗಿನ ಮತ್ಸರವು ತಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಹಿಂದೆ ಹಾಕುವ ಸಂದರ್ಭಗಳಲ್ಲಿ ತನ್ನ ಪತಿಯ ಬೆಂಬಲಕ್ಕೆ ಎಂದೂ ನಿಂತಿರುತ್ತಿರಲಿಲ್ಲ ಎಂದು ಒಪ್ಪಿಕೊಂಡಿರುತ್ತಾರೆ. ಲೇಡಿ ಮೌಂಟ್‌‌ಬ್ಯಾಟನ್‌‌ರು ೨೧ ಫೆಬ್ರವರಿ ೧೯೬೦ರಂದು ತಮ್ಮ ೫೮ನೆಯ ವಯಸ್ಸಿನಲ್ಲಿ ನಾರ್ತ್‌ ಬಾರ್ನಿಯೋದಲ್ಲಿ ವೈದ್ಯಕೀಯ ಸೌಲಭ್ಯಗಳ ತಪಾಸಣೆಯನ್ನು ಕೈಗೊಂಡಿದ್ದಾಗ ಮರಣಿಸಿದ್ದರು. ಹೃದಯದ ಸಮಸ್ಯೆಯಿಂದಾಗಿ ಆಕೆಯ ಮರಣವು ಸಂಭವಿಸಿರಬಹುದೆಂದು ಭಾವಿಸಲಾಗಿದೆ. ೧೯೭೯ರಲ್ಲಿ ತನ್ನ ಹತ್ಯೆಯಾಗುವವರೆಗೂ, ಮೌಂಟ್‌‌ಬ್ಯಾಟನ್‌‌ ತಾನು ಒಂದು ಕಾಲದಲ್ಲಿ ಅವಳ ಮೇಲೆ ಹೊಂದಿದ್ದ ವ್ಯಾಮೋಹದ ನೆನಪಿಗಾಗಿ ತನ್ನ ಸೋದರ ಸಂಬಂಧಿ ರಷ್ಯಾದ ಗ್ರಾಂಡ್‌ ಡಚೆಸ್‌ ಮಾರಿಯಾ ನಿಕೋಲೇವ್ನಾಳ ಭಾವಚಿತ್ರವನ್ನು ತನ್ನ ಹಾಸಿಗೆಯ ಬಳಿಯಲ್ಲಿ ಯಾವಾಗಲೂ ಇಟ್ಟುಕೊಂಡಿರುತ್ತಿದ್ದರು. === ವಾರಸುದಾರಳಾಗಿ ಮಗಳು === ಮೌಂಟ್‌‌ಬ್ಯಾಟನ್‌‌ರಿಗೆ ಗಂಡು ಮಕ್ಕಳಿರಲಿಲ್ಲವಾದುದರಿಂದ ೨೩ ಆಗಸ್ಟ್‌‌ ೧೯೪೬ರಂದು ಆತನಿಗೆ ವೈಕೌಂಟ್‌‌ ಪದವಿಯನ್ನು, ನಂತರ ಅರ್ಲ್‌ ಪದವಿಯನ್ನು ಹಾಗೂ ೨೮ ಅಕ್ಟೋಬರ್‌‌ ೧೯೪೭ರಂದು ಬ್ಯಾರನ್‌‌ ಪದವಿಗಳನ್ನು ಪಡೆದಾಗ ಒಡೆತನದ ದಾಖಲೆಗಳನ್ನು ಹಕ್ಕುಗಳು ಪುತ್ರಿಯರಿಗೆ ಹಾಗೂ ನಂತರ ಅವರ ಪುತ್ರವರ್ಗಕ್ಕೆ ಸಲ್ಲುವಂತೆ ಸಿದ್ಧಪಡಿಸಲಾಗಿತ್ತು. ಇದು ಆತನ ಒತ್ತಾಸೆಯ ಆಗ್ರಹವಾಗಿತ್ತು : ನಿರ್ದಿಷ್ಟವಾಗಿ ತನ್ನ ಹಿರಿಯ ಪುತ್ರಿಯೊಂದಿಗೆ ಇದ್ದ ಆತನ ಸಂಬಂಧವು ತೀರ ಹತ್ತಿರದ್ದಾಗಿತ್ತು ಹಾಗೂ ಆಕೆಯು ತನ್ನ ಉಪಾಧಿಗೆ ತನ್ನ ಸ್ವಂತ ಹಕ್ಕಿನಿಂದಲೇ ಬರಬೇಕೆಂಬುದು ಆತನ ವಿಶೇಷ ಇಚ್ಛೆಯಾಗಿತ್ತು. ಬಹು ದೀರ್ಘಕಾಲದಿಂದಲೂ ಸೇನಾಪಡೆಯ ದಳಪತಿಗಳ ವಿಚಾರದಲ್ಲಿ ಇಂತಹಾ ಶೇಷಾಧಿಕಾರದ ನಿದರ್ಶನಗಳು ಇದ್ದೇ ಇವೆ : ಹಿಂದಿನ ಉದಾಹರಣೆಗಳಲ್ಲಿ ೧ನೆಯ ವೈಕೌಂಟ್‌‌ ನೆಲ್ಸನ್‌ ಮತ್ತು ೧ನೆಯ ಅರ್ಲ್‌ ರಾಬರ್ಟ್‌ಸ್‌ಗಳು ಸೇರಿದ್ದರು. === ಬಿಡುವಿನ ಹವ್ಯಾಸಗಳು === ರಾಜ ಕುಟುಂಬಗಳ ಹಲವು ಸದಸ್ಯರುಗಳ ಹಾಗೆಯೇ ಮೌಂಟ್‌‌ಬ್ಯಾಟನ್‌‌ ಕೂಡಾ ಪೋಲೋ ಆಟದ ಕಟ್ಟಾ ಅಭಿಮಾನಿಯಾಗಿದ್ದು ೧೯೩೧ರಲ್ಲಿ ಪೋಲೋ ಸ್ಟಿಕ್‌/ದಾಂಡನ್ನು ರೂಪಿಸಿದ್ದುದಕ್ಕಾಗಿ .. ಹಕ್ಕುಸ್ವಾಮ್ಯ ಸಂಖ್ಯೆ ೧,೯೯೩,೩೩೪ಅನ್ನು ಪಡೆದಿದ್ದರು. === ವೇಲ್ಸ್‌‌ನ ಪ್ರಭುವಿಗೆ ಸಲಹಾಕಾರತ್ವ === ಮೌಂಟ್‌‌ಬ್ಯಾಟನ್‌‌ರು ತನ್ನ ಸೋದರಸಂಬಂಧಿ ಮೊಮ್ಮಗ ವೇಲ್ಸ್‌‌ನ ರಾಜಕುಮಾರನ ಬೆಳೆಸುವಿಕೆಯಲ್ಲಿ ಹಾಗೂ ನಂತರ ಓರ್ವ ಸಲಹಾಕಾರನಾಗಿ ಆತನ ಜೀವನದಲ್ಲಿ ಬಹುಮಟ್ಟಿಗೆ ಪ್ರಭಾವ ಬೀರಿದ್ದರು — ಪ್ರಭುವಿನ ಜೀವನಚರಿತ್ರೆಯನ್ನು ಬರೆದಿದ್ದ ಜೋನಾಥನ್‌‌ ಡಿಂಬ್ಲೆಬಿಯ ಪ್ರಕಾರ ಅವರಿಬ್ಬರೂ ಪರಸ್ಪರರನ್ನು ಅಕ್ಕರೆಯಿಂದ "ಗೌರವಾನ್ವಿತ ಅಜ್ಜ " ಮತ್ತು "ಗೌರವಾನ್ವಿತ ಮೊಮ್ಮಗ"ಎಂದು ಸಂಬೋಧಿಸಿಕೊಳ್ಳುತ್ತಿದ್ದರು — ಝೀಗ್ಲೆರ್‌‌ ವಿರಚಿತ ಮೌಂಟ್‌‌ಬ್ಯಾಟನ್‌‌ರ ಜೀವನಚರಿತ್ರೆ ಹಾಗೂ ಡಿಂಬ್ಲೆಬಿ ವಿರಚಿತ ಪ್ರಭುವಿನ ಜೀವನಚರಿತ್ರೆಗಳೆರಡರ ಪ್ರಕಾರವೂ ಇದರಿಂದಾದ ಫಲಿತಗಳು ಮಿಶ್ರಿತವಾಗಿದ್ದವು. ತನ್ನ ಯೌವನಕಾಲದಿಂದಲೂ ಮೌಂಟ್‌‌ಬ್ಯಾಟನ್‌‌ನಿಗೆ ಬಹಳ ಪರಿಚಯವಿದ್ದ ವಿಂಡ್ಸರ್‌‌ನ ಡ್ಯೂಕ್‌ ಎಂದು ನಂತರ ಹೆಸರಾಗಿದ್ದ ವೇಲ್ಸ್‌‌ನ ಪ್ರಭು ಆತನ ಪೂರ್ವವರ್ತಿ ಮಹಾರಾಜ ಎಡ್ವರ್ಡ್‌ VIIIನು ಹೊಂದಿದ್ದ ವಿಶ್ರಾಮ ಸುಖವನ್ನು ನಿರೀಕ್ಷಿಸುವ/ಕಲಾಪ್ರೇಮದ ಗುಣಲಕ್ಷಣಗಳನ್ನು ತೋರ್ಪಡಿಸುತ್ತಿದ್ದೀಯೇ ಎಂದು ಆತನು ಕಾಲದಿಂದ ಕಾಲಕ್ಕೆ ರಾಜಕುಮಾರನನ್ನು ಜೋರಾಗಿಯೇ ಗದರಿಸುತ್ತಿದ್ದರು. ಆದರೂ ಆತ ರಾಜಕುಮಾರನನ್ನು ಅವಿವಾಹಿತ ಜೀವನವನ್ನು ಅನುಭವಿಸುವ ಸಂದರ್ಭದಲ್ಲಿ ಅನುಭವಿಸುವಂತೆ ಹಾಗೂ ಸ್ಥಿರ ದಾಂಪತ್ಯ ಜೀವನಕ್ಕಾಗಿ ಓರ್ವ ಯುವ ಹಾಗೂ ಅನುಭವರಹಿತ ಹುಡುಗಿಯನ್ನು ಮದುವೆಯಾಗುವಂತೆ ಉತ್ತೇಜನವನ್ನೂ ನೀಡುತ್ತಿದ್ದರು. ಈ ನಿರ್ದಿಷ್ಟ ಸಿಂಹಾಸನದ ಉತ್ತರಾಧಿಕಾರಿಗೆ ಸಲಹಾಕರನಾಗಿರುವುದಕ್ಕೆ ಮೌಂಟ್‌‌ಬ್ಯಾಟನ್‌‌ರಿಗಿದ್ದ ಅರ್ಹತೆಯು ಅನನ್ಯಸಾಧಾರಣವಾಗಿತ್ತು ; ಮಹಾರಾಜ ಜಾರ್ಜ್‌‌ ಮತ್ತು ರಾಣಿ ಎಲಿಜಬೆತ್‌‌‌ರನ್ನು ಡಾರ್ಟ್‌ಮೌತ್‌‌ ಬ್ರಿಟಿಷರ ನೌಕಾದಳೀಯ ಮಹಾವಿದ್ಯಾಲಯ/ರಾಯಲ್‌ ನೇವಲ್‌ ಕಾಲೇಜ್‌ಗೆ ೨೨ ಜುಲೈ ೧೯೩೯ರಂದು ನೀಡಿದ ಭೇಟಿಯನ್ನು ಆಯೋಜಿಸಿದ್ದು ಈತನೇ ಆಗಿದ್ದು, ಯುವ ರಾಜಕುಮಾರಿಯರಾದ ಎಲಿಜಬೆತ್‌‌‌ ಮತ್ತು ಮಾರ್ಗರೇಟ್‌‌ರ ಪ್ರಸ್ತಾಪವು ಆಹ್ವಾನದಲ್ಲಿರುವಂತೆ ಖಚಿತಪಡಿಸಿಕೊಳ್ಳುವ ಎಚ್ಚರಿಕೆಯನ್ನು ವಹಿಸಿ ನಂತರ ತನ್ನ ಸೋದರಸಂಬಂಧಿ ಗ್ರೀಸ್‌‌ನ ಕೆಡೆಟ್‌ ರಾಜಕುಮಾರ ಫಿಲಿಪ್‌ನನ್ನು ಅವರ ಪೋಷಕರು ವಿದ್ಯಾಲಯವನ್ನು ವೀಕ್ಷಿಸಲು ತೆರಳುವಾಗ ರಾಜಕುಮಾರಿಯನ್ನು ಹರ್ಷದಿಂದಿಡಲು ನೇಮಿಸಿದ್ದರು. ಇದು ಚಾರ್ಲ್ಸ್‌ನ ಭವಿಷ್ಯದ ಪೋಷಕರ ಪ್ರಥಮ ದಾಖಲಿತ ಭೇಟಿಯಾಗಿತ್ತು. ಆದರೆ ಕೆಲವು ತಿಂಗಳುಗಳ ನಂತರ ಅಥೆನ್ಸ್‌ನಲ್ಲಿದ್ದ ಆತನ ಸಹೋದರಿ ಅಲೈಸ್‌‌ಳಿಂದ ಫಿಲಿಪ್‌ ತನ್ನನ್ನು ಭೇಟಿ ಮಾಡಲು ಬರುತ್ತಿದ್ದಾನೆ ಹಾಗೂ ಆತನು ಖಾಯಮ್ಮಾಗಿ ಗ್ರೀಸ್‌‌ಗೆ ಮರಳಲು ಸಮ್ಮತಿಸಿರುವುದಾಗಿ ತಿಳಿಸುವ ಪತ್ರವೊಂದನ್ನು ಪಡೆದಾಗ ಮೌಂಟ್‌‌ಬ್ಯಾಟನ್‌‌ರ ಪ್ರಯತ್ನಗಳು ಬಹುಮಟ್ಟಿಗೆ ವ್ಯರ್ಥವೆನಿಸಿಕೊಳ್ಳುವ ಹಾಗಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಫಿಲಿಪ್‌ ತನ್ನ ಸೋದರ ಸಂಬಂಧಿ ಹಾಗೂ ಸಾಮಂತರಾಜ ಗ್ರೀಸ್‌‌ನ ಮಹಾರಾಜ ಜಾರ್ಜ್‌‌ IIರಿಂದ ಬ್ರಿಟನ್‌‌‌ನಲ್ಲಿನ ತನ್ನ ನೌಕಾದಳೀಯ ವೃತ್ತಿಜೀವನವನ್ನು ಮುಂದುವರೆಸುವಂತೆ ಆದೇಶ ಬಂದಾಗ ಅದಕ್ಕೆ ಯಾವುದೇ ವಿವರಣೆಯಿರದೇ ಹೋದರೂ ಯುವ ರಾಜಕುಮಾರ ಅದನ್ನು ಪಾಲಿಸಿದ್ದನು. ೧೯೭೪ರಲ್ಲಿ ಮೌಂಟ್‌‌ಬ್ಯಾಟನ್‌‌ನು ತನ್ನ ಮೊಮ್ಮಗಳು . ಅಮಂಡಾ ನಾಚ್‌ಬುಲ್‌‌ಳೊಂದಿಗೆ ಸಂಭಾವ್ಯ ವಿವಾಹದ ಪ್ರಸ್ತಾಪದೊಂದಿಗೆ ಚಾರ್ಲ್ಸ್‌ರೊಡನೆ ಪತ್ರ ವ್ಯವಹಾರ ಆರಂಭಿಸಿದರು. ಸರಿ ಸುಮಾರು ಇದೇ ಹೊತ್ತಿಗೆ ಆತನು ೨೫-ವರ್ಷಗಳ-ವಯಸ್ಸಿನ ರಾಜಕುಮಾರನಿಗೆ ಯೌವನದ ಸ್ವಚ್ಛಂದತೆಯನ್ನು ಅನುಭವಿಸಲು ಹುರಿದುಂಬಿಸಿದ. ತನ್ನ ವಿವಾಹದ ಬಗೆಗಿನ ಆಸಕ್ತಿಯ ಬಗ್ಗೆ ಅಮಂಡಾಳ ತಾಯಿ ಲೇಡಿ ಬ್ರಾಬೌರ್ನೆಳಿಗೆ (ಈಕೆಯು ಆತನ ಧರ್ಮಮಾತೆಯೂ ಆಗಿದ್ದಳು) ವಿಧೇಯವಾಗಿ ಚಾರ್ಲ್ಸ್‌ ಪತ್ರ ಬರೆದನು. ಆಕೆಯ ಉತ್ತರವು ಇದಕ್ಕೆ ಪೂರಕವಾಗಿಯೇ ಇತ್ತಾದರೂ, ಆತನಿಗೆ ತನ್ನ ಮಗಳು ಮದುವೆಯನ್ನು ಮಾಡಿಕೊಡುವುದಕ್ಕೆ ಸಾಕಷ್ಟು ಚಿಕ್ಕ ವಯಸ್ಸಿನವಳಾಗಿದ್ದಾಳೆಂದು ಭಾವಿಸಿರುವುದಾಗಿ ತಿಳಿಹೇಳಿದ್ದಳು. ನಾಲ್ಕು ವರ್ಷಗಳ ನಂತರ ಮೌಂಟ್‌‌ಬ್ಯಾಟನ್‌‌ ಚಾರ್ಲ್ಸ್‌ನ ೧೯೮೦ರ ಸಾಲಿನ ಭಾರತದ ಪ್ರವಾಸಕ್ಕೆ ಜೊತೆಗಾರರಾಗಿ ಹೋಗಲಿಕ್ಕೆ ತನಗೆ ಹಾಗೂ ಅಮಂಡಾಳಿಗೆ ಆಹ್ವಾನವನ್ನು ಸಂಪಾದಿಸಿಕೊಂಡಿದ್ದರು. ಅವರುಗಳ ತಂದೆಯಂದಿರು ಚುರುಕಾಗಿಯೇ ಇದಕ್ಕೆ ಆಕ್ಷೇಪವನ್ನೆತ್ತಿದರು. ಪ್ರಭು ಫಿಲಿಪ್‌ರು ಭಾರತದ ಜನತೆಯು ಸ್ವಾಗತವು ಸೋದರಮಾವನಿಗೆ ಸಂಬಂಧಿಸಿದ್ದಾಗಿರುತ್ತದೆಯೇ ಹೊರತು ಸೋದರಳಿಯನಿಗಲ್ಲ ಎಂದು ಭಾವಿಸಿದ್ದರು. ಲಾರ್ಡ್‌‌ ಬ್ರಾಬೌರ್ನೆರು ಆತನಿಗೆ ಪತ್ರಿಕೆಗಳ ತೀವ್ರಮಟ್ಟದ ಪರಾಮರ್ಶೆಯು ಮೌಂಟ್‌‌ಬ್ಯಾಟನ್‌‌ನ ಧರ್ಮಪುತ್ರ ಹಾಗೂ ಮೊಮ್ಮಗಳನ್ನು ಹೆಚ್ಚು ಪ್ರತ್ಯೇಕಿಸುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಒಂದುಗೂಡಿಸುವ ಸಾಧ್ಯತೆಗಳು ಖಂಡಿತಾ ಇರೋದಿಲ್ಲ ಎಂದು ತಿಳಿಹೇಳಿದರು. ಭಾರತಕ್ಕೆ ಚಾರ್ಲ್ಸ್‌ ನೀಡಲಿರುವ ಭೇಟಿಯನ್ನು ಮತ್ತೊಮ್ಮೆ ಏಕಾಂಗಿಯಾಗಿ ಕೈಗೊಳ್ಳುವಂತೆ ಮರುನಿಗದಿಪಡಿಸಲಾಯಿತು, ಆದರೆ ಯೋಜಿತ ಬೀಳ್ಕೊಡುವ ದಿನಾಂಕದಂದು ಮೌಂಟ್‌‌ಬ್ಯಾಟನ್‌‌ರು ಬದುಕಿ ಉಳಿದಿರಲಿಲ್ಲ. ಅಂತಿಮವಾಗಿ ೧೯೭೯ರಲ್ಲಿ ನಂತರ ಚಾರ್ಲ್ಸ್‌ ಅಮಂಡಾಳ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟಾಗ ಪರಿಸ್ಥಿತಿಗಳು ದುಃಖಕರವಾಗಿ ಬದಲಾಗಿ ಆಕೆಯು ಆತನನ್ನು ನಿರಾಕರಿಸಿದ್ದಳು. == ಕಿರುತೆರೆಯ ಮೇಲೆ ಕಾಣಿಸಿಕೊಂಡ ಕಾರ್ಯಕ್ರಮಗಳು == ೨೭ ಏಪ್ರಿಲ್‌ ೧೯೭೭ರಂದು ಆತನ ೭೭ನೆಯ ಜನ್ಮದಿನದ ಕೆಲವೇ ದಿನಗಳ ಮೊದಲು ಮೌಂಟ್‌‌ಬ್ಯಾಟನ್‌‌ರು ದಿಸ್‌ ಈಸ್‌ ಯುವರ್‌ ಲೈಫ್‌‌ ಎಂಬ TVಯ ಆಹ್ವಾನಿತರ ಸಂದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರಥಮ ರಾಜಕುಟುಂಬದ ವ್ಯಕ್ತಿಯಾದರು. == ಹತ್ಯೆ == ಮೌಂಟ್‌‌ಬ್ಯಾಟನ್‌‌ರು ಸಾಧಾರಣವಾಗಿ ತಮ್ಮ ವಿರಾಮದ ದಿನಗಳನ್ನು ಸ್ಲಿಗೋ ಕೌಂಟಿಯಲ್ಲಿನ ಮುಲ್ಲಾಘ್‌‌ಮೋರ್‌‌ನಲ್ಲಿನ ತನ್ನ ಬೇಸಿಗೆಯ ನಿವಾಸದಲ್ಲಿ ಕಳೆಯುತ್ತಿದ್ದರು. ಬುಂಡೋರನ್‌‌, ಕೌಂಟಿ ಡೊನೆಗಲ್‌ ಮತ್ತು ಸ್ಲಿಗೋ ಕೌಂಟಿಗಳ ಮಧ್ಯವಿರುವ ಅದೊಂದು ಸಣ್ಣ ಸಮುದ್ರ ಸನಿಹದ ಹಳ್ಳಿಯಾಗಿದ್ದು ಐರ್‌ಲೆಂಡ್‌‌ನ ವಾಯುವ್ಯ ಕರಾವಳಿಯ ಸ್ಲಿಗೋ ಕೌಂಟಿಗೆ ಸೇರಿದ್ದುದಾಗಿತ್ತು. ಬುಂಡೋರನ್‌‌ ಪಟ್ಟಣವು IRAಯ ಸ್ವಯಂಸೇವಾ ಸೈನಿಕರ ಜನಪ್ರಿಯ ವಿರಾಮ ತಾಣವಾಗಿದ್ದು, ಅವರಲ್ಲಿ ಹಲವರು ಮುಲ್ಲಾಘ್‌‌ಮೋರ್‌‌ನಲ್ಲಿ ಮೌಂಟ್‌‌ಬ್ಯಾಟನ್‌‌ರ ಇರುವಿಕೆ ಹಾಗೂ ಅವರ ಚಲನವಲನಗಳ ಬಗ್ಗೆ ತಿಳಿದಿರುವರಾಗಿರುತ್ತಿದ್ದರು. ಗರ್ಡಾ ಸಿಯೋಚಾನಾದ ಸುರಕ್ಷತೆಯ ಬಗೆಗಿನ ಸಲಹೆ ಹಾಗೂ ಎಚ್ಚರಿಕೆಗಳನ್ನು ಲೆಕ್ಕಿಸದೇ ೨೭ ಆಗಸ್ಟ್‌‌ ೧೯೭೯ರಂದು ಮೌಂಟ್‌‌ಬ್ಯಾಟನ್‌‌ರು ಮುಲ್ಲಾಘ್‌‌ಮೋರ್‌‌ನಲ್ಲಿದ್ದ ಬಂದರಿನಲ್ಲಿ ಲಂಗರು ಹಾಕಿದ್ದ ಷ್ಯಾಡೋ ಎಂಬ ಮೂವತ್ತು ಅಡಿಗಳಷ್ಟು (೧೦ ) ದೊಡ್ಡ ಮರದ ದೋಣಿಯಲ್ಲಿ ಕಡಲನಳ್ಳಿಗಳ ಬೇಟೆಗೆ ಹಾಗೂ ಟ್ಯೂನಾ ಮೀನುಗಳನ್ನು ಹಿಡಿಯುವ ಉದ್ದೇಶದಿಂದ ಕಡಲಿಗಿಳಿದರು. ಥಾಮಸ್‌ ಮೆಕ್‌ಮೋಹನ್‌‌ ಎಂಬ ಓರ್ವ ಸದಸ್ಯ ರಕ್ಷಣಾರಹಿತವಾದ ದೋಣಿಗೆ ಆ ರಾತ್ರಿಯಲ್ಲಿ ನುಸುಳಿದ ನಂತರ ರೇಡಿಯೋ ನಿಯಂತ್ರಣವನ್ನು ಹೊಂದಿದ್ದ ಐವತ್ತು ಪೌಂಡ್‌ಗಳ (೨೩ ) ತೂಕದ ಬಾಂಬ್‌ಅನ್ನು ದೋಣಿಗೆ ಅಳವಡಿಸಿದ. ಮೌಂಟ್‌‌ಬ್ಯಾಟನ್‌‌ರು ದೋಣಿಯ ಮೇಲೆ ಡೊನೆಗಲ್‌ ಕೊಲ್ಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಓರ್ವ ಅಪರಿಚಿತ ವ್ಯಕ್ತಿ ತೀರದಿಂದಲೇ ಬಾಂಬ್‌‌ಅನ್ನು ಸ್ಫೋಟಿಸಿದ. ತ್ವರಿತವಾಗಿಯೇ ಲಾಂಗ್‌ಫೋರ್ಡ್‌‌ ಹಾಗೂ ಗ್ರನಾರ್ಡ್‌ಗಳ ನಡುವಿನ ಗರ್ಡಾ ತಪಾಸಣಾ ಕೇಂದ್ರದ ಬಳಿ ಮೆಕ್‌ಮೋಹನ್‌‌ನನ್ನು ಸೆರೆಹಿಡಿಯಲಾಯಿತು. ಆ ವೇಳೆಗೆ ೭೯ ವರ್ಷದವರಾಗಿದ್ದ ಮೌಂಟ್‌‌ಬ್ಯಾಟನ್‌‌ ಗಂಭೀರವಾಗಿ ಗಾಯಗೊಂಡು, ಸ್ಫೋಟವಾದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದಾಗ ಕೊಲ್ಲಿಯಲ್ಲಿ ಮುಳುಗಿ ಮರಣಿಸಿದರು. ಈ ಸ್ಫೋಟದಲ್ಲಿ ಸಾವನ್ನಪ್ಪಿದ ಇತರರಲ್ಲಿ ಆತನ ಹಿರಿಯ ಪುತ್ರಿಯ ೧೪-ವರ್ಷಗಳ ಪುತ್ರ ನಿಕೋಲಸ್‌‌‌‌ ನ್ಯಾಚ್‌ಬುಲ್‌, ; ದೋಣಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ೧೫-ವರ್ಷಗಳ ವಯಸ್ಸಿನ ಫರ್ಮನಾಘ್‌ ಕೌಂಟಿಯ ಪಾಲ್‌ ಮ್ಯಾಕ್ಸ್‌ವೆಲ್‌ ; ಹಾಗೂ ಆತನ ಹಿರಿಯ ಪುತ್ರಿಯ, ೮೩-ವರ್ಷಗಳ ವಯೋವೃದ್ಧೆ ಅತ್ತೆ ಬಾರೊನೆಸ್‌ ಬ್ರಾಬೌರ್ನೆ ಸೇರಿದ್ದಾರೆ ಈಕೆ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಮರುದಿನ ಗಾಯಗಳಿಂದಾಗಿ ಮರಣಿಸಿದ್ದರು. ನಿಕೋಲಸ್‌‌‌‌ ನ್ಯಾಚ್‌ಬುಲ್‌ನ ತಾಯಿ ಮತ್ತು ತಂದೆ ಆತನ ಅವಳಿ ಸಹೋದರ ಟಿಮೊತಿಯೊಂದಿಗೆ ಸ್ಫೋಟದಿಂದ ಪಾರಾದರೂ ತೀವ್ರವಾಗಿ ಗಾಯಗೊಂಡಿದ್ದರು. ಮೌಂಟ್‌‌ಬ್ಯಾಟನ್‌‌ರ ಸಾವಿನ ಬಗ್ಗೆ ಸಿನ್ನ್‌ ಫೇಯ್ನ್‌ನ ಉಪಾಧ್ಯಕ್ಷ ಗೆರ್ರಿ ಆಡಮ್ಸ್‌ ಹೀಗೆ ಹೇಳಿದ್ದರು: IRAಯು ಮರಣದಂಡನೆ ವಿಧಿಸಿದುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿತ್ತು. ಯಾವುದೇ ವ್ಯಕ್ತಿಯು ಹತ್ಯೆಗೊಳಗಾಗುವುದು ದುರದೃಷ್ಟಕರವೆಂದೇ ನಾನೂ ಭಾವಿಸುತ್ತೇನೆ ಆದರೆ ಮೌಂಟ್‌‌ಬ್ಯಾಟನ್‌‌ರ ಸಾವಿನಿಂದ ರೂಪುಗೊಳ್ಳುತ್ತಿರುವ ಕೋಲಾಹಲವು ಮಾಧ್ಯಮ ಸಂಸ್ಥೆಗಳ ಬೂಟಾಟಿಕೆಯ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಹೌಸ್‌ ಆಫ್‌ ಲಾರ್ಡ್ಸ್‌ನ ಓರ್ವ ಸದಸ್ಯರಾಗಿ ಮೌಂಟ್‌‌ಬ್ಯಾಟನ್‌‌ರು ಬ್ರಿಟಿಷ್‌‌ ಹಾಗೂ ಐರ್‌ಲೆಂಡ್‌ಗಳೆರಡರ ರಾಜಕೀಯದಲ್ಲಿಯೂ ಭಾವಾವೇಶವನ್ನು ಉಕ್ಕಿಸುವ ವ್ಯಕ್ತಿಯಾಗಿದ್ದರು. IRAಯು ಆತನೊಂದಿಗೆ ವ್ಯವಹರಿಸಿದ ರೀತಿಯಲ್ಲಿಯೇ ಮೌಂಟ್‌‌ಬ್ಯಾಟನ್‌‌ ತನ್ನ ಜೀವನದ ಕೊನೆಯವರೆಗೂ ಇತರ ಜನರೊಂದಿಗೆ ವ್ಯವಹರಿಸುತ್ತಿದ್ದರು; ಹಾಗೂ ಆತನ ಯುದ್ಧೋತ್ಸಾಹವನ್ನು ಪರಿಗಣಿಸಿದರೆ ಸ್ಪಷ್ಟವಾಗಿ ಯುದ್ಧದ ಪರಿಸ್ಥಿತಿಯಲ್ಲಿ ಸಾವನ್ನಪ್ಪುವ ಬಗ್ಗೆ ಆತನಿಗೆ ಆಕ್ಷೇಪವಿರುತ್ತಿರಲಿಲ್ಲ ಎಂದೇ ಭಾವಿಸುವೆ. ಈ ರಾಷ್ಟ್ರಕ್ಕೆ ಬಂದರೆ ತನಗೆ ಅಪಾಯವಿರುವುದಾಗಿ ಆತನಿಗೆ ತಿಳಿದಿತ್ತು. ನನ್ನ ಅಭಿಪ್ರಾಯದ ಪ್ರಕಾರ IRAಯು ತನ್ನ ಉದ್ದೇಶವನ್ನು ಸಾಧಿಸಿಕೊಂಡಿದೆ : ಐರ್‌ಲೆಂಡ್‌‌ನಲ್ಲಿನ ಬೆಳವಣಿಗೆಗಳೆಡೆ ಜನರು ತಮ್ಮ ಗಮನವನ್ನು ಹರಿಸಲಾರಂಭಿಸಿದ್ದಾರೆ. ಮೌಂಟ್‌‌ಬ್ಯಾಟನ್‌‌ರನ್ನು ಹತ್ಯೆ ಮಾಡಿದ ದಿನದಂದೇ ಕೌಂಟಿ ಡೌನ್‌ ಬಳಿಯ ವಾರ್ರೆನ್‌ಪಾಯಿಂಟ್‌ನಲ್ಲಿ IRAಯು ವಾರ್ರೆನ್‌ಪಾಯಿಂಟ್‌ ಹೊಂಚುದಾಳಿ ಎಂದೇ ಪ್ರಸಿದ್ಧವಾದ ಕಾರ್ಯಾಚರಣೆಯ ಮೂಲಕ ಹದಿನೆಂಟು ಮಂದಿ ಬ್ರಿಟಿಷ್‌‌ ಸೇನಾಪಡೆಯ ಸೈನಿಕರ ಮೇಲೆ ಹೊಂಚುದಾಳಿ ನಡೆಸಿ ಕೊಂದು ಹಾಕಿತು ಅವರಲ್ಲಿ ಹದಿನಾರು ಮಂದಿ ಪ್ಯಾರಾಚ್ಯೂಟ್‌ ರೆಜಿಮೆಂಟ್‌ಗೆ ಸೇರಿದವರಾಗಿದ್ದರು. ನಿರ್ದಿಷ್ಟವಾಗಿ ಮೌಂಟ್‌‌ಬ್ಯಾಟನ್‌‌ರ ಸಾವನ್ನು ಬಹಳ ಕಷ್ಟಕರವೆಂದು ಭಾವಿಸಿದ್ದ ಪ್ರಭು ಚಾರ್ಲ್ಸ್‌ ತನ್ನ ಸ್ನೇಹಿತರ ಬಳಿ ತನ್ನ ಸಲಹಾಕಾರರನ್ನು ಕಳೆದುಕೊಂಡ ನಂತರ ತನ್ನ ಜೀವನವು ಮೊದಲಿನಷ್ಟು ಸುರಳೀತವಾಗಿರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಇದಾದ ನಂತರ ಮೌಂಟ್‌‌ಬ್ಯಾಟನ್‌‌ರು ಅಂತಿಮವಾದ ಐರ್‌ಲೆಂಡ್‌‌ನ ಏಕೀಕರಣದ ಕಡೆಗೆ ಒಲವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. == ಅಂತ್ಯಕ್ರಿಯೆ == ಐರ್‌ಲೆಂಡ್‌‌ನ ಅಧ್ಯಕ್ಷ ಪ್ಯಾಟ್ರಿಕ್‌ ಹಿಲೆರಿ ಹಾಗೂ ಐರಿಷ್‌ ಗಣರಾಜ್ಯದ ಪ್ರಧಾನಮಂತ್ರಿ ಜ್ಯಾಕ್‌ ಲಿಂಚ್‌ ಡಬ್ಲಿನ್‌‌ನಲ್ಲಿನ . ಪ್ಯಾಟ್ರಿಕ್‌ಸ್‌ ಕೆಥಡ್ರಲ್‌ ಇಗರ್ಜಿಯೊಂದರಲ್ಲಿ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾವೇ ಸ್ವತಃ ಯೋಜಿಸಿದ್ದ ಹಾಗೆ ವೆಸ್ಟ್‌ಮಿನ್‌ಸ್ಟರ್‌‌ ಇಗರ್ಜಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸಿದ ಕಿರುತೆರೆ ಪ್ರಸಾರದ ನಂತರ ಮೌಂಟ್‌‌ಬ್ಯಾಟನ್‌‌ರ ದೇಹವನ್ನು ರಾಮ್ಸೆ ಇಗರ್ಜಿಯಲ್ಲಿ ಹೂತಿಡಲಾಯಿತು. ೨೩ ನವೆಂಬರ್‌‌ ೧೯೭೯ರಂದು ಬಾಂಬ್‌ ದಾಳಿಯಲ್ಲಿ ಪಾತ್ರ ವಹಿಸಿರುವುದು ಸಾಬೀತಾದ ನಂತರ ಥಾಮಸ್‌ ಮೆಕ್‌ಮೋಹನ್‌‌ ಕೊಲೆಯ ವಿಚಾರದಲ್ಲಿ ತಪಿತಸ್ಥನೆಂದು ನಿರ್ಣಯಿಸಲಾಯಿತು. ಶುಭ ಶುಕ್ರವಾದ ಒಪ್ಪಂದದ ಅಂಗವಾಗಿ ೧೯೯೮ರಲ್ಲಿ ಆತನನ್ನು ಬಿಡುಗಡೆಗೊಳಿಸಲಾಯಿತು. ಮೌಂಟ್‌‌ಬ್ಯಾಟನ್‌‌ರ ಸಾವಿನ ವಿಚಾರ ತಿಳಿಯಲ್ಪಟ್ಟ ನಂತರ ಶೋಕಭರಿತರಾದ ಆಗಿನ ಮಾಸ್ಟರ್‌ ಆಫ್‌ ದ ಕ್ವೀನ್ಸ್‌ ಮ್ಯೂಸಿಕ್‌ ಆಗಿದ್ದ ಮ್ಯಾಲ್‌ಕಾಲ್ಮ್‌ ವಿಲಿಯಮ್ಸನ್‌ರು ಪಿಟೀಲು ಹಾಗೂ ತಂತಿ ವಾದ್ಯವೃಂದದವರು ನುಡಿಸಲಾಗುವಂತೆ ಬರ್ಮಾದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರ ಸ್ಮರಣೆಗಾಗಿ ಶೋಕಗೀತೆ ಯನ್ನು ರಚಿಸಲು ನಿರ್ಧರಿಸಿದರು. ಈ ೧೧-ನಿಮಿಷಗಳ ಅವಧಿಯ ಕೃತಿಯ ಪ್ರಥಮ ಹಾಡುಗಾರಿಕೆಯನ್ನು ೫ ಮೇ ೧೯೮೦ರಂದು ಸ್ಕಾಟಿಷ್‌ ಬರೋಕ್‌ ಶೈಲಿಯ ಸಂಗೀತಗಾರರ ವೃಂದದಿಂದ ನಡೆಸಿಕೊಡಲ್ಪಟ್ಟಿತು ಇದನ್ನು ಲಿಯೋನಾರ್ಡ್‌ ಫ್ರೀಡ್‌ಮನ್‌ ಆಯೋಜಿಸಿದ್ದರು. == ಹುಟ್ಟಿನಿಂದ ಸಾವಿನವರೆಗೆ ಅವರು ಹೊಂದಿದ್ದ ಅಭಿದಾನ ನಾಮಾಂಕಿತಗಳು == ೧೯೦೦-೧೯೧೩: ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ (: [ ] : {{}}: ()) ೧೯೧೩-೧೯೧೬: ಕೆಡೆಟ್‌ ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ೧೯೧೬-೧೯೧೭: ಮಿಡ್‌ಷಿಪ್‌ಮನ್‌ ಘನತೆವೆತ್ತ ಪ್ರಭು ಬ್ಯಾಟೆನ್‌ಬರ್ಗ್‌‌‌ನ ರಾಜಕುಮಾರ ಲೂಯಿಸ್‌ ೧೯೧೭: ಮಿಡ್‌ಷಿಪ್‌ಮನ್‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ ೧೯೧೭-೧೯೧೮: ಮಿಡ್‌ಷಿಪ್‌ಮನ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ ೧೯೧೮-೧೯೨೦: ಸಬ್‌-ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌ ೧೯೨೦-೧೯೨೧: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, ೧೯೨೧-೧೯೨೮: ಲೆಫ್ಟಿನೆಂಟ್‌‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, ೧೯೨೮-೧೯೩೨: ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, ೧೯೩೨-೧೯೩೭: ದಳಪತಿ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌, ೧೯೩೭-೧೯೪೧: ಕಪ್ತಾನ/ನೌಕಾನಾಯಕ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, ೧೯೪೧-೧೯೪೩: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, , ೧೯೪೩-೧೯೪೬: ಕಾಮಡೋರ್‌ ಲಾರ್ಡ್‌‌ ಲೂಯಿಸ್‌ ಮೌಂಟ್‌‌ಬ್ಯಾಟನ್‌‌, , , ೧೯೪೬-೧೯೪೭: ರೇರ್‌‌ ಅಡ್ಮೀರಲ್‌ ರೈಟ್‌ ಆನರಬಲ್‌ ಬರ್ಮಾದ ವೈಕೌಂಟ್‌‌ ಮೌಂಟ್‌‌ಬ್ಯಾಟನ್‌‌, , , , ೧೯೪೭-೧೯೪೮: ರೇರ್‌‌ ಅಡ್ಮೀರಲ್‌ ಘನತೆವೆತ್ತ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌‌, , , , , , , ೧೯೪೮-೧೯೪೯: ರೇರ್‌‌ ಅಡ್ಮೀರಲ್‌ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, , , , , , , ೧೯೪೯-೧೯೫೩: ವೈಸ್‌-ಅಡ್ಮೀರಲ್‌ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್‌, , , , , , , ೧೯೫೩-೧೯೫೫: ಅಡ್ಮೀರಲ್‌ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, , , , , , , ೧೯೫೫-೧೯೫೬: ಅಡ್ಮೀರಲ್‌ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, , , , , , , ೧೯೫೬-೧೯೬೫: ನೌಕಾದಳಾಧಿಪತಿ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, , , , , , , ೧೯೬೫-೧೯೬೬: ನೌಕಾದಳಾಧಿಪತಿ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, , , , , , , , ೧೯೬೬-೧೯೭೯: ನೌಕಾದಳಾಧಿಪತಿ ರೈಟ್‌ ಆನರಬಲ್‌ ಬರ್ಮಾದ ಅರ್ಲ್‌‌ ಮೌಂಟ್‌‌ಬ್ಯಾಟನ್, , , , , , , , , == ದರ್ಜೆಗಳಲ್ಲಿ ಸಿಕ್ಕ ಬಡತಿಗಳು == ಕೆಡೆಟ್‌, -೧೯೧೩ ಮಿಡ್‌ಷಿಪ್‌ಮನ್‌, -೧೯೧೬ ಸಬ್‌-ಲೆಫ್ಟಿನೆಂಟ್‌, -೧೯೧೮ ಲೆಫ್ಟಿನೆಂಟ್‌, -೧೯೨೦ ಲೆಫ್ಟಿನೆಂಟ್‌‌ -ದಳಪತಿ/ಕಮ್ಯಾಂಡರ್‌, -೧೯೨೮ ದಳಪತಿ/ಕಮ್ಯಾಂಡರ್‌, -೧೯೩೨ ಕಪ್ತಾನ/ನೌಕಾನಾಯಕ, -೧೯೩೭ ಕಾಮಡೋರ್‌, -೧೯೪೧ ಹಂಗಾಮಿ ವೈಸ್‌-ಅಡ್ಮೀರಲ್‌, -೧೯೪೨ ಹಂಗಾಮಿ ಅಡ್ಮೀರಲ್‌, -೧೯೪೩ ರೇರ್‌‌ ಅಡ್ಮೀರಲ್‌, -೧೯೪೬ ವೈಸ್‌-ಅಡ್ಮೀರಲ್, -೧೯೪೯ ಹಂಗಾಮಿ ಅಡ್ಮೀರಲ್‌, -೧೯೫೨ ಅಡ್ಮೀರಲ್, -೧೯೫೩ ನೌಕಾದಳಾಧಿಪತಿ, -೧೯೫೬ == ಗೌರವಗಳು == === ಬ್ರಿಟಿಷ್ === ೧೯೩೭: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ರಾಯಲ್‌ ವಿಕ್ಟೋರಿಯನ್‌ ಆರ್ಡರ್‌ – (೧೯೨೦: , ೧೯೨೨: ) ೧೯೪೦: ನೈಟ್‌‌ ಆಫ್‌ ಜಸ್ಟೀಸ್‌ ಆಫ್‌ ಜಾನ್‌ – (೧೯೨೯: ) ೧೯೪೧: ಕಂಪ್ಯಾನಿಯನ್‌ ಆಫ್‌ ದ ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಆರ್ಡರ್ – ೧೯೪೬: ನೈಟ್‌‌ ಆಫ್‌ ದ ಗಾರ್ಟರ್‌ – ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಸ್ಟಾರ್‌ ಆಫ್‌ ಇಂಡಿಯಾ – ೧೯೪೭: ನೈಟ್‌‌ ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಇಂಡಿಯನ್‌ ಎಂಪೈರ್‌ – ೧೯೫೫: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಬಾತ್‌ – (೧೯೪೩: , ೧೯೪೫: ) ೧೯೬೫: ಮೆಂಬರ್‌ ಆಫ್‌ ದ ಆರ್ಡರ್‌ ಆಫ್‌ ಮೆರಿಟ್‌ – === ವಿದೇಶ === ೧೯೨೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಇಸಾಬೆಲ್‌ ದ ಕ್ಯಾಥೊಲಿಕ್‌ ಆಫ್‌ ಸ್ಪೇನ್‌ ೧೯೨೪: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಕ್ರೌನ್‌ ಆಫ್‌ ರೊಮೇನಿಯಾ ೧೯೩೭: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ರೊಮೇನಿಯಾ ೧೯೪೧: ವಾರ್‌ ಕ್ರಾಸ್‌ (ಗ್ರೀಸ್‌‌) ೧೯೪೩: ಚೀಫ್‌ ಕಮ್ಯಾಂಡರ್‌ ಆಫ್‌ ದ ಲೆಜಿಯನ್‌ ಆಫ್‌ ಮೆರಿಟ್‌ , ಯುನೈಟೆಡ್‌ ಸ್ಟೇಟ್ಸ್‌‌ ೧೯೪೫: ಸ್ಪೆಷಲ್‌ ಗ್ರಾಂಡ್‌ ಕಾರ್ಡನ್‌ ಆಫ್‌ ದ ಆರ್ಡರ್‌ ಆಫ್‌ ದ ಕ್ಲೌಡ್‌ ಅಂಡ್‌ ಬ್ಯಾನರ್‌ ಆಫ್‌ ಚೈನಾ ೧೯೪೫: ಡಿಸ್ಟಿಂಗ್ವಿಷ್‌ಡ್‌ ಸರ್ವೀಸ್‌ ಮೆಡಲ್‌, ಯುನೈಟೆಡ್‌ ಸ್ಟೇಟ್ಸ್‌ ೧೯೪೫: ಏಷ್ಯಾಟಿಕ್‌-ಪೆಸಿಫಿಕ್‌ ಕ್ಯಾಂಪೇನ್‌ ಮೆಡಲ್‌, ಯುನೈಟೆಡ್‌ ಸ್ಟೇಟ್ಸ್‌‌ ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಲೆಜಿಯನ್‌ ಡಿ'ಹಾನ್ನೆಯೂರ್‌ ಆಫ್‌ ಫ್ರಾನ್ಸ್‌‌ ೧೯೪೬: ಕ್ರಾಯಿಕ್ಸ್‌ ಡೆ ಗುಯೆರ್ರೆ, ಫ್ರಾನ್ಸ್‌ ೧೯೪೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಸ್ಟಾರ್‌ ಆಫ್‌ ನೇಪಾಳ್‌ ೧೯೪೬: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ವೈಟ್‌ ಎಲಿಫೆಂಟ್‌ ಆಫ್‌ ಥೈಲೆಂಡ್‌ ೧೯೪೬: ನೈಟ್‌‌ ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಜಾರ್ಜ್‌‌ ಆಫ್‌ ಗ್ರೀಸ್‌‌ ೧೯೪೮: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ನೆದರ್ಲೆಂಡ್ಸ್‌ ಲಯನ್‌ ೧೯೫೧: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ಅವಿಜ್‌ ಆಫ್‌ ಪೋರ್ಚುಗಲ್‌ - ೧೯೫೨: ನೈಟ್‌‌ ಆಫ್‌ ದ ರಾಯಲ್‌ ಆರ್ಡರ್‌ ಆಫ್‌ ದ ಸೆರಾಫಿಮ್‌ ಆಫ್‌ ಸ್ವೀಡನ್‌ - ೧೯೫೬: ಗ್ರ್ಯಾಂಡ್‌ ಕಮ್ಯಾಂಡರ್‌‌ ಆಫ್‌ ದ ಆರ್ಡರ್‌ ಆಫ್‌ ದ ಥಿರಿ ಥುಡಮ್ಮಾ (ಬರ್ಮಾ) ೧೯೬೨: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಡಾನ್ನೆರ್‌ಬ್ರಾಗ್‌ ಆಫ್‌ ಡೆನ್ಮಾರ್ಕ್‌ - ೧೯೬೫: ಗ್ರ್ಯಾಂಡ್‌ ಕ್ರಾಸ್‌‌ ಆಫ್‌ ದ ಆರ್ಡರ್‌ ಆಫ್‌ ದ ಸೀಲ್‌ ಆಫ್‌ ಸೋಲೋಮನ್‌ ಆಫ್‌ ಇಥಿಯೋಪಿಯಾ === ಶಸ್ತ್ರಾಸ್ತ್ರಗಳು === == ರಂಗಭೂಮಿಯ ಮೇಲಿನ ಚಿತ್ರಣಗಳು == ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರನ್ನು ಚಲನಚಿತ್ರಗಳಲ್ಲಿ ಹಲವು ಬಾರಿ ಚಿತ್ರಿಸಲಾಗಿದೆ. ಇನ್‌ ವಿಚ್‌ ವೀ ಸರ್ವ್‌ ಎಂಬುದೊಂದು ೧೯೪೨ರ ಬ್ರಿಟಿಷರ ಯುದ್ಧದ ಬಗೆಗಿನ ರಾಷ್ಟ್ರಪ್ರೇಮಿ ಚಲನಚಿತ್ರವಾಗಿದ್ದು ಇದರ ನಿರ್ದೇಶನವನ್ನು ಡೇವಿಡ್‌ ಲೀನ್‌‌ ಮತ್ತು ನೋಯೆಲ್‌ ಕೊವಾರ್ಡ್‌‌ರು ಮಾಡಿದ್ದರು ಹಾಗೂ ಈ ಚಿತ್ರವು ಮೌಂಟ್‌‌ಬ್ಯಾಟನ್‌‌ರ ಅಧಿಪತ್ಯದಡಿಯಲ್ಲಿ ಕೆಲ್ಲಿಯ ಮುಳುಗುವಿಕೆಯ ಘಟನೆಯಿಂದ ಪ್ರೇರೇಪಿತವಾಗಿತ್ತು. ಕೊವಾರ್ಡ್‌ರು ಮೌಂಟ್‌‌ಬ್ಯಾಟನ್‌‌ರೊಂದಿಗೆ ವೈಯಕ್ತಿಕ ಸ್ನೇಹವನ್ನು ಹೊಂದಿದ್ದರಿಂದ ಅವರ ಹಲವು ಭಾಷಣಗಳನ್ನು ಚಲನಚಿತ್ರದಲ್ಲಿ ಹಾಗೆಯೇ ಉದ್ಧರಿಸಲಾಗಿದೆ. ಆಗಸ್ಟ್‌‌ ೧೯೪೨ರಲ್ಲಿ ನಡೆಸಲಾದ ಪ್ರಖ್ಯಾತ ಅಲ್ಲೈಡ್‌ ಕಮ್ಯಾಂಡೋ ದಾಳಿಯ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಹಾಗೂ ಅನುಮೋದಿಸುವಲ್ಲಿ ಅವರ ವಿವಾದಾಸ್ಪದ ಪಾತ್ರವನ್ನು ಬಿಂಬಿಸುವ ಇತಿಹಾಸಕಾರ ಬ್ರಿಯಾನ್‌ ಲೋರಿಂಗ್‌-ವಿಲ್ಲಾರಿಂದ ರಚಿತವಾದ "ಅನ್‌ ಆಥರೈಸ್ಟ್‌ ಆಕ್ಷನ್‌ "ಕೃತಿಯನ್ನು ಆಧರಿಸಿ ನಿರ್ಮಿಸಿದ ಕಿರುಸರಣಿ "ಡಿಯೆಪ್ಪೆ‌"ಯಲ್ಲಿ ಮೌಂಟ್‌‌ಬ್ಯಾಟನ್‌‌ರನ್ನು ಚಿತ್ರಿಸಲಾಗಿದೆ. ೧೯೬೮ರ ಯುದ್ಧದ ಬಗೆಗಿನ ಚಲನಚಿತ್ರ ದ ಡೆವಿಲ್ಸ್‌ ಬ್ರಿಗೇಡ್‌ನಲ್ಲಿ ಅಲ್ಪಾವಧಿಯ ಪಾತ್ರವೊಂದರಲ್ಲಿ ಪ್ಯಾಟ್ರಿಕ್‌ ನೋಲೆಸ್‌ರು ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ನಿರ್ವಹಿಸಿದ್ದರು. ಮೌಂಟ್‌‌ಬ್ಯಾಟನ್‌‌ರ ಪಾತ್ರವನ್ನು ಸರ್‌ ರಿಚರ್ಡ್‌ ಅಟೆನ್‌ಬರೋರ ೧೯೮೨ರ ಮಹಾಕೃತಿ ಗಾಂಧಿ ಯಲ್ಲಿ ಪೀಟರ್‌ ಹರ್ಲೋವೆ ವಹಿಸಿದ್ದರು. ೧೯೮೬ರಲ್ಲಿ, ವಾಹಿನಿಯು ನಿಕೋಲ್‌ ವಿಲಿಯಮ್ಸನ್‌ ಮತ್ತು ಜ್ಯಾನೆಟ್‌ ಸುಜ್‌ಮನ್‌ರವರುಗಳು ಲಾರ್ಡ್‌‌ ಮತ್ತು ಲೇಡಿ ಮೌಂಟ್‌‌ಬ್ಯಾಟನ್‌‌ರ ಪಾತ್ರಗಳನ್ನು ವಹಿಸಿದ್ದ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ : ದ ಲಾಸ್ಟ್‌ ವೈಸ್‌‌ರಾಯ್‌‌ ಎಂಬ ಚಿತ್ರವನ್ನು ನಿರ್ಮಿಸಿ ಪ್ರಸಾರವನ್ನೂ ಮಾಡಿತ್ತು. ಚಿತ್ರದಲ್ಲಿ ಆತನು ಭಾರತದಲ್ಲಿದ್ದ ಕಾಲಾವಧಿಗೆ ಹೆಚ್ಚು ಮಹತ್ವ ನೀಡಲಾಗಿದ್ದು ನೆಹರೂರೊಂದಿಗಿನ ಲೇಡಿ ಮೌಂಟ್‌‌ಬ್ಯಾಟನ್‌‌ರ ಸಂಬಂಧವನ್ನು ಪರೋಕ್ಷವಾಗಿ ಬಿಂಬಿಸಿತ್ತು. USನಲ್ಲಿ ಮಾಸ್ಟರ್‌ಪೀಸ್‌ ಥಿಯೇಟರ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರು (ಕ್ರಿಸ್ಟೋಫರ್‌ ಓವನ್‌ರು ಈ ಪಾತ್ರ ವಹಿಸಿದ್ದರು) ೨೦೦೮ರ ಚಲನಚಿತ್ರ ದ ಬ್ಯಾಂಕ್‌ ಜಾಬ್‌ ನಲ್ಲಿ ಕಾಣಿಸಿಕೊಂಡಿದ್ದರು, ಈ ಚಿತ್ರವು ೧೯೭೦ರ ದಶಕದ ಸರ್ಕಾರಿ ಪ್ರೇರಿತ ಬ್ಯಾಂಕ್‌ ದರೋಡೆಯ ಕಥೆಯನ್ನು ಹೊಂದಿದೆ. ಪ್ಯಾಡಿಂಗ್‌ಟನ್‌ ಸ್ಟೇಷನ್‌ನ ಗೋಪ್ಯವಾದ ಸ್ಥಳವೊಂದರಲ್ಲಿ ನಡೆಯುವ ಗುಪ್ತ ಭೇಟಿಯೊಂದರಲ್ಲಿ, ಮೌಂಟ್‌‌ಬ್ಯಾಟನ್‌‌ನನ್ನು ಬ್ರಿಟಿಷ್‌‌ ಸರ್ಕಾರದ ಓರ್ವ ಪ್ರತಿನಿಧಿಯನ್ನಾಗಿ ಚಿತ್ರಿಸಲಾಗಿದ್ದು, ರಾಜಕುಟುಂಬವನ್ನು ಮುಜುಗರಕ್ಕೀಡುಮಾಡುವ ಸಂಭಾವ್ಯತೆ ಇರುವ ರಾಜಕುಮಾರಿ/ರಾಣಿ ಮಾರ್ಗರೇಟ್‌‌ಳ ನಗ್ನ ಚಿತ್ರಗಳ ಬದಲಿಗೆ ವಿನಿಮಯವಾಗಿ ಆತನು ಡಕಾಯಿತರಿಗೆ ತಮ್ಮ ಮೇಲೆ ವಿಚಾರಣೆಯನ್ನು ನಡೆಸುವುದಿಲ್ಲವೆಂಬ ರಕ್ಷಣೆಯನ್ನು ಖಾತರಿಪಡಿಸುವ ದಾಖಲೆಗಳನ್ನು ಹಸ್ತಾಂತರಿಸುತ್ತಾನೆ. ಅದಾದ ನಂತರ ವ್ಯಂಗ್ಯವಾಗಿ ಮೌಂಟ್‌‌ಬ್ಯಾಟನ್‌‌ "ಯುದ್ಧವು ಮುಗಿದ ನಂತರದಿಂದ ಇಂತಹಾ ಕಾತರತೆಯನ್ನು ನಾನು ಅನುಭವಿಸಿಯೇ ಇರಲಿಲ್ಲ " ಎಂದು ಹೇಳುತ್ತಾನೆ. ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ನ ಪಾತ್ರವನ್ನು ೨೦೦೮ರ ಕಿರುತೆರೆ ಚಲನಚಿತ್ರ ಇನ್‌ ಲವ್‌ ವಿತ್‌ ಬಾರ್ಬರಾ ಎಂಬ ರಮಣೀಯ ಕಾದಂಬರಿಗಾರ್ತಿ ಬಾರ್ಬರಾ ಕಾರ್ಟ್‌ಲ್ಯಾಂಡ್‌ರ ಜೀವನಚರಿತ್ರೆ ಕುರಿತ ಚಿತ್ರದಲ್ಲಿ ಡೇವಿಡ್‌ ವಾರ್ನರ್‌ರು ವಹಿಸಿದ್ದರು ಈ ಚಿತ್ರವನ್ನು UKನಲ್ಲಿ ಫೋರ್‌ ವಾಹಿನಿಯಲ್ಲಿ ಪ್ರದರ್ಶಿಸಲಾಗಿತ್ತು. ಟೆಡ್‌ ಬೆಲ್‌ರು ರಚಿಸಿದ್ದ ಕಾದಂಬರಿ ವಾರ್‌ಲಾರ್ಡ್‌‌ನಲ್ಲಿ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ರದೂ ಒಂದು ಪಾತ್ರವಿದೆ. ಆತ ಭಾರತದ ವೈಸ್‌‌ರಾಯ್‌‌ ಆಗಿದ್ದಾಗಿನ ಅವಧಿಯ ಭಾಗವನ್ನು ಹಾಗೂ ಆತನ ಪತ್ನಿ ಹಾಗೂ ನೆಹರೂರವರ ನಡುವಿನ ಪ್ರಣಯಕಥೆಯನ್ನು ಸಂಭಾವ್ಯವಾಗಿ ಚಿತ್ರಿಸಲಿದ್ದ ಇತ್ತೀಚೆಗಷ್ಟೇ ರದ್ದಾದ ಚಲನಚಿತ್ರ ಇಂಡಿಯನ್‌ ಸಮ್ಮರ್‌ ನಲ್ಲಿ ಮೌಂಟ್‌‌ಬ್ಯಾಟನ್‌‌ರ ಪಾತ್ರ ಕಾಣಿಸಿಕೊಳ್ಳಬೇಕಾಗಿತ್ತು. ಇದು ಅಲೆಕ್ಸ್‌ ವಾನ್‌ ಟುನ್ಜೆಲ್‌ಮನ್‌ರ ಕೃತಿ : ಯ ಮೇಲೆ ಲಘುವಾಗಿ ಆಧರಿಸಿರಬೇಕಾಗಿತ್ತು. === ಇತರೆ ಗಮನಾರ್ಹ ಹಿರಿಮೆಗಳು === ರಾಮ್ಸೆಯ ವೈಟ್‌ನ್ಯಾಪ್‌ ಎಂಬಲ್ಲಿನ ಬ್ರಾಡ್‌ಲ್ಯಾಂಡ್ಸ್‌‌ ಎಸ್ಟೇಟ್‌ನ ಮೂಲತಃ ಭಾಗವಾಗಿದ್ದ ಭೂಮಿಯಲ್ಲಿ ಆತನ ಹೆಸರಿನಲ್ಲಿಯೇ ದ ಮೌಂಟ್‌‌ಬ್ಯಾಟನ್‌‌ ಶಾಲೆಯನ್ನು ೧೯೬೯ರಲ್ಲಿ ತೆರೆಯಲಾಗಿತ್ತು. ಎಡಿನ್‌ಬರ್ಗ್‌ನಲ್ಲಿನ ಹೀರಿಯಟ್‌-ವಾಟ್‌ ವಿಶ್ವವಿದ್ಯಾಲಯದ ದ ಸ್ಕೂಲ್‌ ಆಫ್‌ ಮ್ಯಾಥೆಮ್ಯಾಟಿಕಲ್‌ ಅಂಡ್‌ ಕಂಪ್ಯೂಟರ್‌ ಸೈನ್ಸಸ್‌ ಎಂಬ ಮಹಾವಿದ್ಯಾಲಯಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಸೌತಾಂಪ್ಟನ್ ವಿಶ್ವವಿದ್ಯಾಲಯದ ಮೌಂಟ್‌‌ಬ್ಯಾಟನ್‌‌ ಸೆಂಟರ್‌ ಫಾರ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ ಎಂಬುದಕ್ಕೂ ಆತನದೇ ಹೆಸರಿಡಲಾಗಿದೆ. ಸಂಸ್ಕೃತಿಗಳ ನಡುವಿನ ಪರಸ್ಪರ ಅರ್ಥೈಸುವಿಕೆಗಳನ್ನು ಹೆಚ್ಚಿಸುವಲ್ಲಿ ಮೌಂಟ್‌‌ಬ್ಯಾಟನ್‌‌ರು ಬಹಳ ಹೆಮ್ಮೆಯನ್ನು ಹೊಂದಿದ್ದರಲ್ಲದೇ ೧೯೮೪ರಲ್ಲಿ, ತನ್ನ ಹಿರಿಯ ಪುತ್ರಿಯು ಪೋಷಕಳಾಗಿದ್ದ ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌ ಎಂಬ ಕಾರ್ಯಕ್ರಮವನ್ನು ಯುವ ವಯಸ್ಕರನ್ನು ತಮ್ಮ ಪರಸ್ಪರರ ಸಂಸ್ಕೃತಿಗಳ ಮೇಲೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಹಾಗೂ ಅದನ್ನು ವಿದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಅವಕಾಶವನ್ನು ಕೊಟ್ಟಿದ್ದರು. ಪಾಸ್ಟ್‌,ಪ್ರೆಸೆಂಟ್‌ ಅಂಡ್‌ ಫ್ಯೂಚರ್‌ ಎಂಬ ೧೯೭೩ರ ಮುದ್ರಿಕೆಯಲ್ಲಿ ಪ್ರಕಟವಾದ ಪೋಸ್ಟ್‌ ವರ್ಲ್ಡ್‌‌ ವಾರ್‌ ಟು ಬ್ಲ್ಯೂಸ್‌ ಎಂಬ ತಮ್ಮ ಗೀತೆಯೊಂದರಲ್ಲಿ ಗಾಯಕ ಹಾಗೂ ಗೀತರಚನೆಕಾರ ಅಲ್‌ ಸ್ಟೀವರ್ಟ್‌ರು ಮೌಂಟ್‌‌ಬ್ಯಾಟನ್‌‌ರು ಭಾರತದ ಬಗ್ಗೆ ವಿನ್‌‌ಸ್ಟನ್‌‌ ಚರ್ಚಿಲ್‌‌ರೊಂದಿಗೆ ಹೊಂದಿದ್ದ ವಿವಾದಾಸ್ಪದ ಭಿನ್ನಾಭಿಪ್ರಾಯದ ಉಲ್ಲೇಖವನ್ನು ಹೊಂದಿದೆ. == ಇವನ್ನೂ ಗಮನಿಸಿ‌ == ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಯೋಜನೆ == ಅಡಿ ಟಿಪ್ಪಣಿಗಳು == == ಹೆಚ್ಚಿನ ಓದಿಗೆ == ಇದನ್ನೂ ನೋಡಿ: ಡೇವಿಡ್‌ ಲೇಯ್‌, "ದ ವಿಲ್ಸನ್‌ ಪ್ಲಾಟ್‌: ದ ಇಂಟೆಲಿಜೆನ್ಸ್‌ ಸರ್ವೀಸಸ್‌ ಅಂಡ್‌ ದ ಡಿಸ್‌ಕ್ರೆಡಿಟಿಂಗ್‌ ಆಫ್‌ ಎ ಪ್ರೈಮ್‌ ಮಿನಿಸ್ಟರ್‌ ೧೯೪೫–೧೯೭೬", ಲಂಡನ್‌‌ : ಹೀನೆಮನ್ನ್‌, ೧೯೮೮ == ಹೆಚ್ಚಿನ ಓದಿಗಾಗಿ == ಫಿಲಿಪ್‌ ಝೀಗ್ಲೆರ್‌‌ , ಮೌಂಟ್‌‌ಬ್ಯಾಟನ್‌‌ : ದ ಅಫಿಷಿಯಲ್‌ ಬಯೋಗ್ರಾಫಿ , (ಕಾಲಿನ್ಸ್‌, ೧೯೮೫) ರಿಚರ್ಡ್‌ ಹಗ್‌‌, ಮೌಂಟ್‌‌ಬ್ಯಾಟನ್‌‌ ; ಹೀರೋ ಆಫ್‌ ಅವರ್‌ ಟೈಮ್‌ , (ವೇಯ್ಡೆನ್‌ಫೆಲ್ಡ್‌ ಮತ್ತು ನಿಕೋಲ್ಸನ್‌, ೧೯೮೦) ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಲಾರ್ಡ್‌‌ ಮೌಂಟ್‌‌ಬ್ಯಾಟನ್‌‌ (ಹಚಿನ್ಸನ್‌, ೧೯೬೮) ಸ್ಮಿತ್‌, ಅಡ್ರಿಯಾನ್‌. ಮೌಂಟ್‌‌ಬ್ಯಾಟನ್‌‌ : ಅಪ್ರೆಂಟಿಸ್‌ ವಾರ್‌ ಲಾರ್ಡ್‌‌ (.. ಟಾರಿಸ್‌; ೨೦೧೦) ೩೮೪ ಪುಟಗಳು; ೧೯೪೩ರವರೆಗಿನ ಜೀವನಚರಿತ್ರೆ. ಆಂಡ್ರ್ಯೂ ರಾಬರ್ಟ್ಸ್‌‌ ಎಮಿನೆಂಟ್‌ ಚರ್ಚಿಲಿಯನ್ಸ್‌ , (ಫೀನಿಕ್ಸ್‌ ಪ್ರೆಸ್, ೧೯೯೪). ಡಾಮಿನಿಕ್‌ ಲೇಪಿಯೆರ್ರೆ ಮತ್ತು ಲ್ಯಾರ್ರಿ ಕಾಲಿನ್ಸ್‌‌ ಫ್ರೀಡಮ್‌ ಅಟ್‌ ಮಿಡ್‌ನೈಟ್‌ , (ಕಾಲಿನ್ಸ್‌, ೧೯೭೫). ರಾಬರ್ಟ್‌ ಲೇಸೆ ರಾಯಲ್‌ (೨೦೦೨) .. ವಿಲ್ಸನ್‌ ಆಫ್ಟರ್‌ ದ ವಿಕ್ಟೋರಿಯನ್ಸ್‌: ೧೯೦೧–೧೯೫೩ , (ಹಚಿನ್ಸನ್‌ , ೨೦೦೫) ಜಾನ್‌ ಲೇಟೈಮರ್‌ ಬರ್ಮಾ : ದ ಫಾರ್‌ಗಾಟನ್‌ ವಾರ್‌ , (ಜಾನ್‌ ಮುರ್ರೆ, ೨೦೦೪) ಮಾಂಟ್‌ಗೋಮೆರಿ -ಮ್ಯಾಸ್ಸಿಂಗ್‌ಬರ್ಡ್‌ , ಹಗ್‌ (ಸಂಪಾದಕ), ಬರ್ಕೆ'ಸ್‌ ಗೈಡ್‌ ಟುದ ರಾಯಲ್‌ ಫ್ಯಾಮಿಲಿ , ಬರ್ಕೆ'ಸ್‌ ಪೀರೇಜ್‌ , ಲಂಡನ್‌‌, ೧೯೭೩, ೦-೨೨೦-೬೬೨೨೨-೩ ಟೋನಿ ಹೀಥ್‌ಕೋಟೆ ದ ಬ್ರಿಟಿಷ್‌‌ ಅಡ್ಮೀರಲ್ಸ್‌ ಆಫ್‌ ದ ಫ್ಲೀಟ್‌ ೧೭೩೪–೧೯೯೫ , (ಪೆನ್‌ & ಸ್ವಾರ್ಡ್‌ , ೨೦೦೨), ೦-೮೫೦೫೨-೮೩೫-೬ ಟಿಮೊತಿ ನ್ಯಾಚ್‌ಬುಲ್‌ ಫ್ರಮ್‌ ಎ ಕ್ಲಿಯರ್‌ ಬ್ಲ್ಯೂ ಸ್ಕೈ: ಸರ್ವೈವಿಂಗ್‌ ದ ಮೌಂಟ್‌‌ಬ್ಯಾಟನ್‌‌ ಬಾಂಬ್‌ , (ಹಚಿನ್ಸನ್‌ ೨೦೦೯). ಈಗ ಜೀವದಿಂದಿರುವ ಮೌಂಟ್‌‌ಬ್ಯಾಟನ್‌‌ರ ಅವಳಿ ಮೊಮ್ಮಗ ವರ್ಣಿಸಿರುವ ವೈಯಕ್ತಿಕ ಕಥಾನಕ. == ಬಾಹ್ಯ ಕೊಂಡಿಗಳು‌‌ == . - ಬರ್ಮಾದ 1ನೆಯ ಅರ್ಲ್ ಮೌಂಟ್‌ಬ್ಯಾಟನ್ ಲೂಯಿಸ್ ಅವರಿಗೆ ಅರ್ಪಣೆ ಮತ್ತು ಸ್ಮರಣಾರ್ಥ 30 2017 ವೇಬ್ಯಾಕ್ ಮೆಷಿನ್ ನಲ್ಲಿ. ಕಂಬೈನ್‌ಡ್‌ ಓಪ್ಸ್‌ ಜರ್ಮನ್‌‌ -ದೋಣಿ/ಬೋಟ್‌ -35 ಅಧಿಕಾರಿಗಳೊಂದಿಗೆ ಸಂವಾದ ದ ಮೌಂಟ್‌‌ಬ್ಯಾಟನ್‌‌ ಅಸ್ಯಾಸಿನೇಷನ್‌ : ಎ ರಿಟ್ರೋಸ್ಪೆಕ್ಟೀವ್‌ ದ ಮೌಂಟ್‌‌ಬ್ಯಾಟನ್‌‌ ಸ್ಕೂಲ್‌, ರಾಮ್ಸೆ- ://....//. 17 2008 ವೇಬ್ಯಾಕ್ ಮೆಷಿನ್ ನಲ್ಲಿ. ಮೌಂಟ್‌‌ಬ್ಯಾಟನ್‌‌ ಇಂಟರ್ನ್‌ಷಿಪ್‌ ಪ್ರೋಗ್ರಾಮ್‌